the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home RTI

ಅನಿಲ ನೀತಿ ಶುಲ್ಕದಲ್ಲಿ ಇಳಿಕೆ; ರಾಜ್ಯ ಸಂಚಿತ ನಿಧಿಗೆ ನಷ್ಟ, ಖಾಸಗಿ ಏಜೆನ್ಸಿಗಳಿಗೆ ಬೇಷರತ್‌ ಲಾಭಾಂಶ!

thefilestack by thefilestack
March 23, 2024
in RTI
0
0
SHARES
1
VIEWS
Share on FacebookShare on Twitter

ಬೆಂಗಳೂರು; ಕರ್ನಾಟಕ ರಾಜ್ಯ ಅನಿಲ ವಿತರಣೆ ಜಾಲ ಅಭಿವೃದ್ಧಿ ನೀತಿಯು ಒಂದು ಕಡೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟುಮಾಡಿ ಇನ್ನೊಂದು ಕಡೆ ಅನುಷ್ಠಾನದ ಏಜೆನ್ಸಿಗೆ ಬೇಷರತ್ತಾಗಿ ಲಾಭಾಂಶವನ್ನು ಒದಗಿಸಿದೆ.

 

 

ಅನಿಲ ಸರಬರಾಜು ಸಂಸ್ಥೆಗಳಿಗೆ ಆಗುವ ಲಾಭ ಮತ್ತು ಉಳಿತಾಯವಾಗುವ ಮೊತ್ತದ ವರ್ಗಾವಣೆಯ ಕುರಿತಾಗಿ ಸಚಿವ ಎಂ ಬಿ ಪಾಟೀಲ್‌ ಮತ್ತು ಅಂದು ಮುಖ್ಯ ಕಾರ್ಯದರ್ಶಿಗಳಾಗಿದ್ದ ವಂದಿತಾ ಶರ್ಮಾ ಅವರು ಟಿಪ್ಪಣಿಯಲ್ಲಿ ದಾಖಲಿಸಿರುವ ಅಂಶಗಳೂ ಚರ್ಚೆಗೆ ಗ್ರಾಸವಾಗಿವೆ.

 

 

ಕರ್ನಾಟಕ ರಾಜ್ಯ ಅನಿಲ ವಿತರಣೆ ಜಾಲ ಅಭಿವೃದ್ಧಿ ನೀತಿಯ ಕುರಿತಾಗಿ ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ಸಮಗ್ರ ದಾಖಲೆಗಳನ್ನು ಪಡೆದುಕೊಂಡಿದೆ.

 

 

ಎಂ ಬಿ ಪಾಟೀಲ್‌ ಅವರ ಟಿಪ್ಪಣಿಯಲ್ಲೇನಿದೆ?

 

 

‘ನಗರ ಅನಿಲ ವಿತರಣೆ ಯೋಜನೆ ಅಭಿವೃದ್ಧಿ ರಾಜ್ಯ ನೀತಿಯನ್ನು ಸಚಿವ ಸಂಪುಟದ ಅನುಮೋದನೆಗೆ ಮಂಡಿಸುವುದು ಹಾಗೂ ಪ್ರಸ್ತಾಪಿತ ನೀತಿಯಲ್ಲಿ The permission and supervision charges for laying of gas pipeline along the roads shall be Rs.1000 per Kilometre  ಎಂದು ನಿಗದಿಪಡಿಸಲಾಗಿದ್ದು ಇದರಿಂದ ಗ್ಯಾಸ್‌ ಪೈಪ್‌ಲೈನ್‌ ಅಳವಡಿಕೆಯಲ್ಲಿ ಉಳಿತಾಯವಾಗುವ ಮೊತ್ತವು ಅಂತಿಮ ಬಳಕೆದಾರರಿಗೆ ವರ್ಗಾವಣೆಯಾಗುವುದನ್ನು ಖಚಿತಪಡಿಸಿಕೊಳ್ಳುವುದು,’ ಎಂದು ಟಿಪ್ಪಣಿಯಲ್ಲಿ ದಾಖಲಿಸಿರುವುದು ಗೊತ್ತಾಗಿದೆ.

 

 

 

 

ವಿಶೇಷವೆಂದರೇ ಈ ನೀತಿಗೆ ಸಚಿವ ಸಂಪುಟದ ಅನುಮೋದನೆಯ ನಂತರ ಮುಖ್ಯ ಕಾರ್ಯದರ್ಶಿಗಳು ತಮ್ಮ ವಿಶೇಷ ಟಿಪ್ಪಣಿಯನ್ನು ಸೇರಿಸಿರುವುದು ಕಡತದಿಂದ ಗೊತ್ತಾಗಿದೆ.

 

 

 

ವಂದಿತಾ ಶರ್ಮಾ ಅವರ ಟಿಪ್ಪಣಿಯಿದು

 

 

“ಈ ಬಗ್ಗೆ ಚರ್ಚಿಸಲಾಗಿದೆ” ಮತ್ತು “ಅನಿಲ ಸರಬರಾಜು ಸಂಸ್ಥೆಗಳಿಗೆ ಆಗುವ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಆಡಳಿತ ಶಾಖೆ ಕ್ರಮ ಕೈಗೊಳ್ಳಬೇಕು” ಸೂಚಿಸಿದ್ದಾರೆ.

 

 

 

 

ಅಂತಿಮ ಬಳಕೆದಾರರಿಗೆ ಅಂದರೆ ಸಾರ್ವಜನಿಕರಿಗೆ ಯಾವುದೇ ಒಂದು ಆರ್ಥಿಕ ಪ್ರಯೋಜನವನ್ನು ತಲುಪಿಸುವ ಜವಾಬ್ದಾರಿಯು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದರೆ ಸರ್ಕಾರದ ಈ ಆದ್ಯ ಕರ್ತವ್ಯವನ್ನು ಸರ್ಕಾರವೇ ಒಂದು ಖಾಸಗಿ ಅನುಷ್ಠಾನ ಏಜೆನ್ಸಿಗೆ ಸಂಪೂರ್ಣ ಲಾಭಾಂಶವನ್ನು ಒದಗಿಸುವ ರೀತಿಯಲ್ಲಿಯೇ ಸಿಜಿಡಿ ನೀತಿಯನ್ನು ರೂಪಿಸಿದಂತಿದೆ. ಇದು ಸರ್ಕಾರದ ಪ್ರಾಥಮಿಕ ಕರ್ತವ್ಯಗಳಿಗೆ ತದ್ವಿರುದ್ಧವಾಗಿರುತ್ತದೆ ಎಂಬ ಅಭಿಪ್ರಾಯಗಳೂ ಅಧಿಕಾರಿಶಾಹಿ ವಲಯದಲ್ಲಿ ವ್ಯಕ್ತವಾಗಿವೆ.

 

 

ಬಳಕೆದಾರರಿಗೆ ಲಾಭ ವರ್ಗಾವಣೆ ಆಗಲಿದೆಯೇ?

 

 

ಅನಿಲ ಸರಬರಾಜು ದರ ಕೇಂದ್ರ ಮಟ್ಟದಲ್ಲಿ ಎಲ್ಲರಿಗೂ ಅನ್ವಯವಾಗುವ ರೀತಿ ನಿರ್ಧರಿತವಾಗುವಾಗ ನಿಕಟಪೂರ್ವ ಮುಖ್ಯ ಕಾರ್ಯದರ್ಶಿಗಳ ಟಿಪ್ಪಣಿಯಲ್ಲಿದ್ದಂತೆ ಬಳಕೆದಾರರಿಗೆ ಹೇಗೆ ಅದು ವರ್ಗಾಯಿಸಲ್ಪಡಬಹುದು ಎಂಬ ಪ್ರಶ್ನೆಯೂ ಕೇಳಿ ಬಂದಿದೆ.

 

 

ಉದಾಹರಣೆಗೆ ಶುಲ್ಕದಲ್ಲಿ ಇಳಿಕೆ ಆಗಿರುವುದರಿಂದ ಮೇಘಾ ಇಂಜಿನಿಯರಿಂಗ್ ಸಂಸ್ಥೆಗೆ 1,788 ಕೋಟಿ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಸರ್ಕಾರವು ಗುತ್ತಿಗೆದಾರ ಸಂಸ್ಥೆಗಳಿಗೆ ಆಗಿರುವ ಲಾಭವನ್ನು ಲೆಕ್ಕಹಾಕಿ ನಿರ್ಣಯಿಸಿ ದಾಖಲಿಸಿಲ್ಲ. ಹೀಗಾಗಿ ಈ ಲಾಭವನ್ನು ಹೇಗೆ ಗ್ರಾಹಕರಿಗೆ ವರ್ಗಾಯಿಸಲು ಸಾಧ್ಯ, ಅದೇ ರೀತಿ ಎಷ್ಟು ವರ್ಷಗಳ ಅವಧಿಯಲ್ಲಿ ಈ ಲಾಭ ವರ್ಗಾವಣೆ ಆಗಲು ಸಾಧ್ಯ ಎಂಬ ಪ್ರಶ್ನೆಯೂ ಉದ್ಭವಿಸಿದೆ.

 

 

ಒಂದೇ ಏಟಿಗೆ ಶುಲ್ಕ ಪಾವತಿಯಲ್ಲಿ 1,788 ಕೋಟಿ ಲಾಭ ಮಾಡಿಕೊಳ್ಳಲಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರಲಿರುವ ಸಂಸ್ಥೆಯು ಗ್ರಾಹಕರಿಗೆ ಪ್ರತಿ ಕೆಜಿ ಅನಿಲಕ್ಕೆ ಹತ್ತು ಪೈಸೆ ವಿನಾಯಿತಿ ನೀಡಿದರೆ ಅದರಿಂದ ಸಾರ್ವಜನಿಕರಿಗೆ ಯಾವ ಲಾಭ ಆಗಲಿದೆ ಎಂಬ ಪ್ರಶ್ನೆಗೆ ಕಡತದ ಯಾವ ಹಾಳೆಯಲ್ಲಿಯೂ ಉತ್ತರವಿಲ್ಲ ಮತ್ತು ಅದಕ್ಕೆ ಸೂಕ್ತ ಸಮರ್ಥನೆಯೂ ಇಲ್ಲ.

 

 

‘ಈ ಶುಲ್ಕ ಇಳಿಕೆಯಿಂದಾಗಿ ಹೆಚ್ಚಿಗೆ ಅನಿಲ ಮಾರಾಟ ಆಗಿ ಅನಿಲ ಮಾರಾಟದ ತೆರಿಗೆ ಹಣ ಹೆಚ್ಚಿಗೆ ಆಕರಗೊಳ್ಳುವುದು ಎಂದು  ಮೂಲಸೌಕರ್ಯ ಇಲಾಖೆ ನೀಡುವ ಸಮರ್ಥನೆಯೇ ಹಾಸ್ಯಾಸ್ಪದವಾಗಿದೆ.ಕೆಜಿ ಅನಿಲಕ್ಕೆ ಹತ್ತು ಪೈಸೆ ಇಳಿಕೆಯಾದರೆ ಸಾರ್ವಜನಿಕರೇನು ಅನಿಲವನ್ನು ಹೆಚ್ಚು ಹೆಚ್ಚಾಗಿ ಖರೀದಿ ಮಾಡಿ ಅದನ್ನು ತಮ್ಮ ಮನೆಯ ಗಿಡಗಳಿಗೆ ಹಾಕಲು ಆಗುತ್ತದೆಯೇ,’ ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.

 

 

‘ಪ್ರಸ್ತಾಪಿತ ಸಿಜಿಡಿ ನೀತಿಯಲ್ಲಿ ಈ ಅಂಶವನ್ನು ಸಂಪೂರ್ಣವಾಗಿ ಕೈಬಿಟ್ಟಿದೆ.   ಅನುಷ್ಠಾನದ ಏಜೆನ್ಸಿಗೆ ಒದಗಿಸುತ್ತಿರುವ ಲಾಭಾಂಶವನ್ನು ಅಂತಿಮ ಬಳಕೆದಾರರಾದ ಸಾರ್ವಜನಿಕರಿಗೆ ತಲುಪಿಸುವುದರಲ್ಲಿ ಸರ್ಕಾರದ ಚಿತ್ತ ಶುದ್ದಿಯನ್ನು ಪ್ರಶ್ನಿಸಲು ಅವಕಾಶ ನೀಡಿದಂತಾಗುತ್ತದೆ,’ ಎಂದೂ ತಮ್ಮ ಅಭಿಪ್ರಾಯನ್ನು ವಿಸ್ತರಿಸುತ್ತಾರೆ.

 

 

ಕೇಂದ್ರ ಸರ್ಕಾರದ ಎಂಒಪಿಎನ್‌ಜಿ ಮತ್ತು ಪಿಎನ್‌ಜಿಆರ್‍‌ಬಿ ಅವರು ಸಿಜಿಡಿ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲು ಅನುವಾಗುವಂತೆ ಅನುಷ್ಠಾನದ ಏಜೆನ್ಸಿಗಳಿಗೆ ಪರವಾನಗಿ ಮತ್ತು ಮೇಲ್ವಿಚಾರಣೆ ಶುಲ್ಕಕ್ಕೆ ರಿಯಾಯಿತಿ/ವಿನಾಯಿತಿ ನೀಡಲು ಕೋರಿದ್ದರು.

 

ಅವರ ಕೋರಿಕೆ ಮೇರೆಗೆ ಮಾತ್ರ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಸಿಜಿಡಿ ನೀತಿಯಲ್ಲಿ ಅನುಷ್ಠಾನದ ಏಜೆನ್ಸಿಗೆ ಪರವಾನಗಿ ಮತ್ತು ಮೇಲ್ವಿಚಾರಣೆ ಶುಲ್ಕಕ್ಕೆ ರಿಯಾಯಿತಿ/ವಿನಾಯಿತಿ ನೀಡಿದೆ. ಇದರಿಂದ ವಿನಾಯಿತಿಗೆ ಸಮಾನವಾದ ಲಾಭಾಂಶವನ್ನು ಅಂತಿಮ ಬಳಕೆದಾರರಾದ ಸಾರ್ವಜನಿಕರಿಗೆ ತಲುಪಿಸುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರದ ಎಂಒಪಿಎನ್‌ಜಿ ಮತ್ತು ಪಿಎನ್‌ಜಿಆರ್‍‌ಬಿರವರೇ ವಹಿಸಬೇಕೆಂದು ಪ್ರಸ್ತಾಪಿಸುವುದು ಸಮಂಜಸವಲ್ಲ ಎಂದು  ಅಧಿಕಾರಿಯೊಬ್ಬರು ವಾದವನ್ನೂ  ಮುಂದಿಡುತ್ತಾರೆ.

 

‘ಏಕೆಂದರೇ ರಾಜ್ಯ ಸರ್ಕಾರವು ಸಿಜಿಡಿ ನೀತಿಯಲ್ಲಿ ಅನುಷ್ಠಾನದ ಏಜೆನ್ಸಿಗೆ ಪರವಾನಗಿ ಮತ್ತು ಮೇಲ್ವಿಚಾರಣೆ ಶುಲ್ಕಕ್ಕೆ ರಿಯಾಯಿತಿ/ವಿನಾಯಿತಿ ನೀಡಿರುವುದರಿಂದ ರಾಜ್ಯದ ಸಂಚಿತ ನಿಧಿಗೆ ನಷ್ಟವಾಗುತ್ತದೆಯೇ ಹೊರತು ಕೇಂದ್ರ ಸರ್ಕಾರದ ಸಂಚಿತ ನಿಧಿಗೆ ಯಾವುದೇ ನಷ್ಟ ಉಂಟಾಗುವುದಿಲ್ಲ,’ ಎಂದು ವಿಶ್ಲೇಷಿಸುತ್ತಾರೆ  ಹಿರಿಯ ಅಧಿಕಾರಿಯೊಬ್ಬರು.

 

 

ಒಂದು ವೇಳೆ ಪ್ರಸ್ತಾಪಿತ ಅನುಷ್ಠಾನದ ಏಜೆನ್ಸಿಯಿಂದ ರಾಜ್ಯ ಸರ್ಕಾರವು ರಾಜ್ಯದ ಸಿಜಿಡಿ ನೀತಿ ಮೂಲಕ ಗರಿಷ್ಠ ಮೊತ್ತ ಪರವಾನಗಿ ಮತ್ತು ಮೇಲ್ವಿಚಾರಣೆ ಶುಲ್ಕವನ್ನು ವಸೂಲು ಮಾಡಿದಲ್ಲಿ ರಾಜ್ಯ ಸರ್ಕಾರವೇ ಸದರಿ ಲಾಭಾಂಶವನ್ನು ಅಂತಿಮ ಬಳಕೆದಾರರಿಗೆ ತಲುಪಿಸಬಹುದಾಗಿತ್ತು.

 

 

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕೇಂದ್ರದ ರೆಗ್ಯುಲೆಟರಿ ಸಂಸ್ಥೆಗಳನ್ನು ಕೋರಿರುವುದರಿಂದ ಪರವಾನಗಿ ಮತ್ತು ಮೇಲ್ವಿಚಾರಣೆ ಶುಲ್ಕಕ್ಕೆ ರಿಯಾಯಿತಿ/ವಿನಾಯಿತಿ ನೀಡಿ ಒಂದು ಕಡೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟುಮಾಡಿ ಇನ್ನೊಂದು ಕಡೆ ಅನುಷ್ಠಾನದ ಏಜೆನ್ಸಿಗೆ ಬೇಷರತ್ತಾಗಿ ಲಾಭಾಂಶವನ್ನು ಒದಗಿಸಿದಂತಾಗಿದೆ.

 

 

ಕೊನೆಗೆ ಈ ಲಾಭಾಂಶವನ್ನು ಅಂತಿಮ ಬಳಕೆದಾರರಿಗೆ ತಲುಪಿಸುವ ಜವಾಬ್ದಾರಿಯನ್ನು ಕೇಂದ್ರದ ರೆಗ್ಯುಲೆಟರಿ ಸಂಸ್ಥೆಗಳು ನೋಡಿಕೊಳ್ಳಬೇಕೆಂದು ಪ್ರಸ್ತಾಪಿಸುವುದು ರಾಜ್ಯ ಜನತೆಯ ಹಿತಾಸಕ್ತಿಯನ್ನು ಕಾಪಾಡಬೇಕಾದ ರಾಜ್ಯ ಸರ್ಕಾರದ ಆದ್ಯ ಕರ್ತವ್ಯವನ್ನು ತಳ್ಳಿ ಹಾಕಿದಂತಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ.

 

ಶುಲ್ಕ ಇಳಿಕೆ ಮತ್ತು ಅಂತಿಮ ಬಳಕೆದಾರರಿಗೆ ಇದರ ಲಾಭಾಂಶ ದೊರೆಯಲಿದೆ ಎಂಬ ಬಗ್ಗೆಯೂ ಹಲವು ಪ್ರಶ್ನೆಗಳು ಉದ್ಭವಿಸಿವೆ.

 

1. ನೂತನ ನಗರ ಅನಿಲ ಸರಬರಾಜು ನೀತಿಯ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಅಭಿಪ್ರಾಯವನ್ನೇ ಪಡೆಯದೇ ಇದ್ದರೂ ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳ ವಿರುದ್ಧವಾಗಿ  ನೂತನ ಅನಿಲ ಸರಬರಾಜು ನೀತಿಯನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ಮುಖ್ಯ ಕಾರ್ಯದರ್ಶಿಗಳು ಏಕೆ  ಒಪ್ಪಿದರು?

 

2. ನಿಕಟಪೂರ್ವ ಮುಖ್ಯ ಕಾರ್ಯದರ್ಶಿಗಳು ಸಚಿವ ಸಂಪುಟದ ಅನುಮೋದನೆಯ ನಂತರ ಅನಿಲ ಸರಬರಾಜು ಸಂಸ್ಥೆಗಳಿಗೆ ಆಗುವ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಆಡಳಿತ ಶಾಖೆ ಕ್ರಮ ಕೈಗೊಳ್ಳಬೇಕು ಎಂದು ತಮ್ಮ ವಿಶೇಷ ಟಿಪ್ಪಣಿಯಲ್ಲಿ ದಾಖಲಿಸಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಆಗಿತ್ತೆ?

 

3. ಇದೇ ವಿಷಯ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಹಲವಾರು ಬಾರಿ ಸಚಿವ ಸಂಪುಟದ ಮುಂದೆ ಬಂದು ಬದಿಗಿಡಲಾಗಿತ್ತು. ಈ  ವಿಷಯವನ್ನು ನಿಕಟಪೂರ್ವ ಮುಖ್ಯ ಕಾರ್ಯದರ್ಶಿಗಳು ಈ ಸರ್ಕಾರಕ್ಕೆ/ ಸಚಿವಸಂಪುಟಕ್ಕೆ ತಿಳಿಸಿದ್ದರೇ?

 

4. ನೂತನ ನೀತಿಯಿಂದ ಅನಿಲ ಸರಬರಾಜು ಸಂಸ್ಥೆಗಳಿಗೆ ಲಾಭ ಆಗುತ್ತಿರುವುದು ನಿಕಟಪೂರ್ವ ಮುಖ್ಯ ಕಾರ್ಯದರ್ಶಿಗಳಿಗೆ ಅರಿವಿದ್ದರೆ ಅನಿಲ ಸರಬರಾಜು ಸಂಸ್ಥೆಗಳಿಗೆ ಒಟ್ಟೂ ಎಷ್ಟು ಮೊತ್ತದ ಲಾಭ ಆಗುತ್ತಿದೆ ಮತ್ತು ಇದರಿಂದಾಗಿ ಸರ್ಕಾರಕ್ಕೆ ಎಷ್ಟು ಆದಾಯ ಖೋತಾ ಆಗುತ್ತದೆ ಎನ್ನುವುದನ್ನು ಲೆಕ್ಕ ಹಾಕಿ ತಿಳಿಸಲು ಮುಖ್ಯ ಕಾರ್ಯದರ್ಶಿಗಳು ಸೂಚಿಸಿದ್ದರೇ?

 

5. ಅನಿಲ ಸರಬರಾಜು ಸಂಸ್ಥೆಗಳಿಗೆ ಒಟ್ಟೂ ಎಷ್ಟು ಮೊತ್ತದ ಲಾಭ ಆಗುತ್ತಿದೆ ಎನ್ನುವುದನ್ನು ಲೆಕ್ಕ ಹಾಕಿಲ್ಲವಾದಲ್ಲಿ ಸಾರ್ವಜನಿಕರಿಗೆ ಒಟ್ಟೂ ಎಷ್ಟು ಮೊತ್ತ ವರ್ಗಾವಣೆ ಆಗಬೇಕಿದೆ ಎಂದು ಯಾರು ತೀರ್ಮಾನಿಸುವುದು?

 

6. ಅನಿಲ ಸರಬರಾಜು ಸಂಸ್ಥೆಗಳಿಗೆ ಆಗುವ ಲಾಭ ಸಾರ್ವಜನಿಕರಿಗೆ ದೊರೆಯುವುದೇ ಅನಿಶ್ಚಿತವಾಗಿರುವಾಗ ಶುಲ್ಕ ಕಡಿಮೆ ಮಾಡಿ ಸರ್ಕಾರಕ್ಕೆ ನಷ್ಟವಾಗುವ ಕ್ರಮಕ್ಕೆ ಏಕೆ ನಿಕಟಪೂರ್ವ ಮುಖ್ಯ ಕಾರ್ಯದರ್ಶಿಗಳು ಮೌನವಾಗಿದ್ದರು?

Tags: AdaniBasavaraj BommaiBJP governmentc c patilCGDD K ShivakumarGas Policyh d kumarswamyiasIDDM. B. PatilManjulaMegha GasPolicyPublic InterestreductionSatish JarkiholiSiddaramaiahaState GovernmentTotal GasVandita Sharmaಅನಿಲಅನಿಲ ಸರಬರಾಜುಅನುಮತಿಅನುಮೋದನೆಎಂ ಬಿ ಪಾಟೀಲ್‌ಕೇಂದ್ರ ಸರ್ಕಾರಕೈಗಾರಿಕೆಡಿ ಕೆ ಶಿವಕುಮಾರ್ನಗರಾಭಿವೃದ್ಧಿನೀತಿಪರವಾನಗಿಬಸವರಾಜ ಬೊಮ್ಮಾಯಿಮುಖ್ಯ ಕಾರ್ಯದರ್ಶಿಮೂಲಸೌಲಭ್ಯಮೇಲ್ವಿಚಾರಣೆರಜನೀಶ್‌ ಗೋಯಲ್ಲಾಭಾಂಶಲೋಕೋಪಯೋಗಿವಂದಿತಾ ಶರ್ಮಾಶುಲ್ಕ ಇಳಿಕೆಶುಲ್ಕ ಇಳೀಕೆಸಂಚಿತಸಚಿವ ಸಂಪುಟಸತೀಶ್‌ ಜಾರಕಿಹೊಳಿಸಾರ್ವಜನಿಕಸಿಜಿಡಿಸಿದ್ದರಾಮಯ್ಯಹಿತಾಸಕ್ತಿಹೆಚ್‌ ಡಿ ಕುಮಾರಸ್ವಾಮಿ
Advertisement Banner
Previous Post

ಅನಿಲ ನೀತಿ ಶುಲ್ಕ; ಪಿಡಬ್ಲ್ಯೂಡಿಗೆ ಕಿಮ್ಮತ್ತಿಲ್ಲ, ನಗರಾಭಿವೃದ್ಧಿ ಅಭಿಪ್ರಾಯವೇ ಇಲ್ಲ, ತಿಪ್ಪೆ ಸಾರಿಸಿತು ಸಾರಿಗೆ

Next Post

ಅನುಮತಿ ಇಲ್ಲದೇ ನೇಮಕಾತಿಗೆ ಮುಂದಾದ ವಿಧಾನ ಪರಿಷತ್‌; ಅಧಿಸೂಚನೆ ಹಿಂಪಡೆಯಲು ನಿರ್ದೇಶನ, ಮುಖಭಂಗ?

thefilestack

thefilestack

Next Post

ಅನುಮತಿ ಇಲ್ಲದೇ ನೇಮಕಾತಿಗೆ ಮುಂದಾದ ವಿಧಾನ ಪರಿಷತ್‌; ಅಧಿಸೂಚನೆ ಹಿಂಪಡೆಯಲು ನಿರ್ದೇಶನ, ಮುಖಭಂಗ?

Recommended

ಪಿಐಎಲ್‌ ವಿಚಾರಣೆ ; ಪೊಲೀಸ್‌ ಪೇದೆಗಳು ಮುಚ್ಚಿಟ್ಟಿದ್ದ ಸತ್ಯ ಬಹಿರಂಗಗೊಳ್ಳುವುದೇ?

6 years ago

ಪರಿಶಿಷ್ಟರ ಕಲ್ಯಾಣಕ್ಕೆ 8,086.60 ಕೋಟಿ ಖರ್ಚಾಗಿದ್ದರೂ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲ

4 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd