the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home CBI/CID

ಅವರೆಕಾಳು ದಾಸ್ತಾನು ಹಗರಣ; 23 ಕೋಟಿ ರು. ನಷ್ಟದ ತನಿಖಾ ವರದಿ ಸಲ್ಲಿಸಲು ಸಿಐಡಿಗೆ ನಿರ್ದೇಶನ

thefilestack by thefilestack
May 3, 2022
in CBI/CID
0
0
SHARES
0
VIEWS
Share on FacebookShare on Twitter

ಬೆಂಗಳೂರು; ಚಿಕ್ಕಬಳ್ಳಾಪುರದ ಚಿಂತಾಮಣಿಯ ಉಗ್ರಾಣ ನಿಗಮದ ಗೋದಾಮಿನಲ್ಲಿದ್ದ ಅವರೆಕಾಳು ಸೇರಿದಂತೆ ಇನ್ನಿತರೆ ಧಾನ್ಯಗಳ ದಾಸ್ತಾನನ್ನು ಒಟ್ಟು ವಿವಿಧ ಬ್ಯಾಂಕ್‌ಗಳಲ್ಲಿ ಅಡಮಾನವಿರಿಸಿದ್ದ ಪ್ರಕರಣದಲ್ಲಿ ಅಧಿಕಾರಿಗಳು ವೈಯಕ್ತಿಕ ಸಾಲ ಎತ್ತಿ 23 ಕೋಟಿ ರು. ಆರ್ಥಿಕ ನಷ್ಟಕ್ಕೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಪ್ರಸ್ತುತ ಹಂತದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಗೃಹ ಇಲಾಖೆಯು ಸಿಐಡಿಗೆ ನಿರ್ದೇಶಿಸಿದೆ.

 

ಪ್ರಕರಣವನ್ನು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಿಐಡಿಗೆ ಒಪ್ಪಿಸಿದ್ದರು. ಮೂರು ವರ್ಷಗಳಾದರೂ ಸಿಐಡಿ ವರದಿ ಸಲ್ಲಿಸಿರಲಿಲ್ಲ. ಹೀಗಾಗಿ ಗೃಹ ಇಲಾಖೆಯು ತನಿಖೆಯ ಸದ್ಯದ ಹಂತದ ಕುರಿತು ವರದಿ ಸಲ್ಲಿಸಬೇಕು ಎಂದು 2022ರ ಏಪ್ರಿಲ್‌ 28ರಂದು ಗೃಹ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪೊಲೀಸ್‌ ಮಹಾನಿರ್ದೇಶಕರಿಗೆ ನಿರ್ದೇಶಿಸಿ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ರಾಜ್ಯ ಉಗ್ರಾಣದ ಚಿಂತಾಮಣಿಯ ಶಾಖೆಯಲ್ಲಿ ಕರ್ನಾಟಕ ರಾಜ್ಯ ಉಗ್ರಾಣ ನಿಗಮಕ್ಕೆ 23 ಕೋಟಿಗೂ ಹೆಚ್ಚು ಆರ್ಥಿಕ ನಷ್ಟ ಆಗಿರುವ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಆದೇಶಿಸಲಾಗಿತ್ತು. ಪ್ರಕರಣದ ಪ್ರಸ್ತುತ ಹಂತದ ವರದಿಯನ್ನು ಕೂಡಲೇ ಸರ್ಕಾರಕ್ಕೆ ಸಲ್ಲಿಸಬೇಕು,’ ಎಂದು ನಿರ್ದೇಶಿಸಿದ್ದಾರೆ.

 

ಒಳಾಡಳಿತ ಇಲಾಖೆಯು ಸಿಐಡಿಗೆ ಬರೆದಿರುವ ಪತ್ರದ ಪ್ರತಿ

 

ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ದಾಸ್ತಾನು ಗೋದಾಮುಗಳಲ್ಲಿ ಸಂಗ್ರಹವಾಗಿರುವ ಆಹಾರ ಧಾನ್ಯಗಳ ದುರುಪಯೋಗವಾಗುತ್ತಿದೆ ಎಂಬ ಗಂಭೀರ ಆರೋಪಗಳನ್ನು ಚಿಂತಾಮಣಿ ಪ್ರಕರಣ ಮತ್ತಷ್ಟು ವಿಸ್ತರಿಸಿತ್ತು. ಆದರೆ ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

 

ಪ್ರಕರಣದ ಹಿನ್ನೆಲೆ

 

ರಾಜ್ಯ ಉಗ್ರಾಣ ನಿಗಮದ ಚಿಂತಾಮಣಿ ಶಾಖೆಯ ಲೆಕ್ಕ ಪರಿಶೋಧನೆ ವೇಳೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. ನಿಗಮದ ವ್ಯವಸ್ಥಾಪಕ ಗಂಗರುದ್ರಯ್ಯ ಎಂಬುವರು ಗೋದಾಮಿನಲಿದ್ದ ಅವರೆಕಾಳು ಸೇರಿದಂತೆ ಇನ್ನಿತರ ಧಾನ್ಯಗಳನ್ನು ವಿವಿಧ ಬ್ಯಾಂಕ್‌ಗಳಲ್ಲಿ ಅಡಮಾನ ಇರಿಸಿ ಖಾಸಗಿ ಉದ್ದೇಶಕ್ಕೆ ಸಾಲ ಎತ್ತುವ ಮೂಲಕ  ನಿಗಮಕ್ಕೆ 23,15,43,455 ರು. ಆರ್ಥಿಕ ನಷ್ಟ ಉಂಟು ಮಾಡಿದ್ದರು ಎಂದು ಲೆಕ್ಕ ಪರಿಶೋಧನೆಯ ಮಧ್ಯಂತರ ವರದಿಯಲ್ಲಿ ವಿವರಿಸಲಾಗಿತ್ತು.

 

2014-2015 ನೇ ಸಾಲಿನಿಂದಲೂ ಚಿಂತಾಮಣಿಯಲ್ಲಿರುವ ಗೋದಾಮಿನಲ್ಲಿ ಅವರೆ ಕಾಳು ಸಂಗ್ರಹವಾಗಿತ್ತು. ಉಗ್ರಾಣ ನಿಗಮದ ವ್ಯವಸ್ಥಾಪಕ ಗಂಗರುದ್ರಯ್ಯ ಎಂಬುವರು ವಿವಿಧ ಬ್ಯಾಂಕುಗಳಲ್ಲಿ ಅಡಮಾನ ಮಾಡುವ ಮೂಲಕ ದುರಪಯೋಗಪಡಿಸಿಕೊಂಡಿದ್ದರು. ಈ ಸಂಬಂಧ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಬೆಂಗಳೂರಿನ ಪ್ರಾದೇಶಿಕ ವ್ಯವಸ್ಥಾಪಕ ಅಶೋಕ್‌ಕುಮಾರ್‌ ಅವರು ಚಿಂತಾಮಣಿ ನಗರ ಠಾಣೆಯಲ್ಲಿ ದೂರು ನೀಡಿದ್ದರು.

 

ದೂರಿನಲ್ಲೇನಿದೆ?

 

ಚಿಂತಾಮಣಿ ನಗರದ ಉಗ್ರಾಣದಲ್ಲಿದ್ದ ದಾಸ್ತಾನನ್ನು ಉಗ್ರಾಣದ ವ್ಯವಸ್ಥಾಪಕ ಗಂಗರುದ್ರಯ್ಯ ಕೆಲ ವ್ಯಾಪಾರಸ್ಥರೊಂದಿಗೆ ಶಾಮೀಲಾಗಿ ದಾಸ್ತಾನನ್ನು ವಿವಿಧ ಬ್ಯಾಂಕ್‌ಗಳಿಗೆ ಅಡಮಾನ ಮಾಡಿ 22 ಕೋಟಿ ರೂ.ಗಳ ಸಾಲ ಪಡೆದಿದ್ದರು.  2014-15ನೇ ಸಾಲಿನಲ್ಲಿ ಉಗ್ರಾಣದ ದಾಸ್ತಾನಿನಲ್ಲಿದ್ದ ಅವರೆಕಾಳನ್ನು ಬ್ಯಾಂಕ್‌ನಲ್ಲಿ  ಅಡಮಾನ ಇರಿಸಿ ಸಾಲ ಪಡೆದಿದ್ದಾರೆ. ಸಾಲ ಪಡೆದು ವರ್ಷಗಳೇ ಕಳೆದಿದ್ದರೂ ಸಾಲ ಮರುಪಾವತಿ ಆಗಿರಲಿಲ್ಲ.  ಸಾಲದ ಅಸಲು ಮತ್ತು ಇದುವರೆಗಿನ ಬಡ್ಡಿ ಸೇರಿ ಒಂದೂವರೆ ಕೋಟಿ ರೂ.ಮೀರಿತ್ತು.  ಈ ಹಣವನ್ನು ಬ್ಯಾಂಕಿಗೆ ಪಾವತಿ ಮಾಡದ ಗಂಗಭೈರಯ್ಯ ಅವರು ದಾಸ್ತಾನನ್ನೂ ಅಕ್ರಮವಾಗಿ ಬಿಡುಗಡೆ ಮಾಡಿದ್ದರು ಎಂದು ವಿವರಿಸಲಾಗಿದೆ.

 

ಹಾಗೆಯೇ ಉಗ್ರಾಣದಲ್ಲಿದ್ದ 55, 215 ಚೀಲಗಳನ್ನು ಹಿರಿಯ ಅಧಿಕಾರಿಗಳಿಗೆ ಹಾಗೂ ಬ್ಯಾಂಕ್‌ಗಳಿಗೂ ಸ್ವಲ್ಪವೂ ಮಾಹಿತಿ ನೀಡದೆ ಮಹಾಂತೇಶ್‌ ಮತ್ತು ಕಾರ್ತಿಕ್‌ ಎಂಬ ವ್ಯಾಪಾರಸ್ಥರಿಂದ ದಾಸ್ತಾನು ಶುಲ್ಕ ಪಡೆಯದೆ ಗಂಗರುದ್ರಯ್ಯ ವ್ಯಾಪಾರಿಗಳಿಗೆ ಬಿಡುಗಡೆ ಮಾಡಿದ್ದರು.

 

ಈ ಮೂಲಕ ಉಗ್ರಾಣ ನಿಮಗಕ್ಕೆ ಕೋಟ್ಯಂತರ ರೂ.ಗಳ ನಷ್ಠ ಉಂಟಾಗಿದೆ ಎಂದು  ದೂರಿನಲ್ಲಿ ವಿವರಿಸಿದ್ದರು.  ಪ್ರತಿ ಅರ್ಧ ವಾರ್ಷಿಕ ಹಾಗೂ ವಾರ್ಷಿಕ ಲೆಕ್ಕಪರಿಶೋಧನೆ ನಡೆಸಬೇಕು. ಆದರೆ ಕಳೆದ 5 ವರ್ಷಗಳ ಅವಧಿಯಲ್ಲಿ ಕೇವಲ 1 ಬಾರಿಯಷ್ಟೇ ಆಡಿಟ್‌ ನಡೆದಿದೆ ಎಂದೂ ದೂರಿನಲ್ಲಿ ಹೇಳಲಾಗಿದೆ.

 

ರಾಜ್ಯದ ವಿವಿಧೆಡೆ ಇರುವ ಉಗ್ರಾಣ ನಿಗಮದ ಅಧಿಕಾರಿಗಳು ಆಹಾರ ಧಾನ್ಯಗಳನ್ನು ಕಳ್ಳ ಮಾರ್ಗದಲ್ಲಿ ಬ್ಯಾಂಕ್‌ಗಳಲ್ಲಿ ಅಡಮಾನ ಇರಿಸುವ ಪ್ರಕರಣಗಳಿಂದಾಗಿ ಸರ್ಕಾರಕ್ಕೆ ಕೋಟ್ಯಂತರ ರು.ಗಳ ಆರ್ಥಿಕ ನಷ್ಟ ಸಂಭವಿಸುತ್ತಿದೆ ಎನ್ನಲಾಗಿದೆ.

 

ಸಿಐಡಿ ತನಿಖಾ ತಂಡ ಈ ಜಾಲವನ್ನು ಭೇದಿಸಿದಲ್ಲಿ ರಾಜ್ಯ ಉಗ್ರಾಣ ನಿಗಮದ ವಿವಿಧ ಜಿಲ್ಲೆಗಳಲ್ಲಿರುವ ಗೋದಾಮುಗಳಲ್ಲಿಯೂ ಆಹಾರ ಧಾನ್ಯಗಳ ದುರುಪಯೋಗ ಮತ್ತು ಬ್ಯಾಂಕ್‌ಗಳಲ್ಲಿ ಅಡಮಾನ ಇರಿಸಿ ಖಾಸಗಿ ಉದ್ದೇಶಕ್ಕೆ ವೈಯಕ್ತಿಕ ಸಾಲ ಎತ್ತಿ ಆರ್ಥಿಕ ನಷ್ಟವಾಗಿರುವ ಮತ್ತಷ್ಟು ಪ್ರಕರಣಗಳು ಹೊರಬೀಳುವ ಸಾಧ್ಯತೆಗಳಿವೆ.

 

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸೇರಿದ ಪಡಿತರ, ಆಹಾರ ಧಾನ್ಯಗಳನ್ನು ರಾಜ್ಯ ಉಗ್ರಾಣ ನಿಗಮದ ಗೋದಾಮುಗಳಲ್ಲಿ ಶೇಖರಿಸಿಡಲಾಗುತ್ತದೆ. ಹಿಂದಿನ ಕಾಂಗ್ರೆಸ್‌ ಸರ್ಕಾರದ ಜನಪ್ರಿಯ ಯೋಜನೆ ಅನ್ನಭಾಗ್ಯದ ಪಡಿತರವೂ ಗೋದಾಮುಗಳಲ್ಲಿ ಸಂಗ್ರಹಿಸಿಡಲಾಗಿತ್ತು. ವ್ಯಾಪಾರಸ್ಥರು ಮತ್ತು ಅಧಿಕಾರಿಗಳ ಶಾಮೀಲಿನಿಂದಾಗಿ ಅನ್ನಭಾಗ್ಯದ ಅಕ್ಕಿಯೂ ಕಾಳಸಂತೆಕೋರರ ಪಾಲಾಗುತ್ತಲೇ ಇದೆ.

 

ಬೆಳಕಿಗೆ ಬಂದ ಪ್ರಕರಣಗಳಲ್ಲಿ ಒಂದಷ್ಟು ಮಂದಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದ ಆಹಾರ ನಾಗರಿಕ ಸರಬರಾಜು, ಸಹಕಾರ ಮತ್ತು ಪೊಲೀಸ್‌ ಇಲಾಖೆ ಈ ಬಗ್ಗೆ ವಿಸ್ತ್ರತವಾಗಿ ತನಿಖೆ ನಡೆಸಿಲ್ಲ. ಚಿಂತಾಮಣಿ ಪ್ರಕರಣವನ್ನು ಮೇಲ್ಪಂಕ್ತಿಯನ್ನಾಗಿಸಿಕೊಂಡು ಸಿಐಡಿ ತನಿಖಾ ತಂಡ, ಇದರ ಜಾಲವನ್ನು ಭೇದಿಸಬೇಕಿದೆ ಎನ್ನುತ್ತಾರೆ ಉಗ್ರಾಣ ನಿಗಮದ ಅಧಿಕಾರಿಯೊಬ್ಬರು.

Tags: Agricultral Marketing DepartmentBasavaraj BommaiChintamaniCIDco operationD K ShivakumarGodownsh d kumarswamyInvestigatininvestigationInvestigation OfficerS T SomshekharSiddaramaiahWare Housesಅಡಮಾನಅವರೆಕಾಳುಆರ್ಥಿಕ ನಷ್ಟಉಗ್ರಾಣ ದಾಸ್ತಾನುಉಗ್ರಾಣಗಳುಎಚ್‌ ಡಿ ಕುಮಾರಸ್ವಾಮಿಎಸ್‌ ಟಿ ಸೋಮಶೇಖರ್‌ಒಳಾಡಳಿತ ಇಲಾಖೆಕಳ್ಳ ಮಾರ್ಗದಲ್ಲಿ ಆಹಾರ ಧಾನ್ಯಗಳ ಸಾಗಣೆಖಾಸಗಿ ಉದ್ದೇಶಕ್ಕೆ ಸಾಲಗೃಹ ಇಲಾಖೆಚಿಕ್ಕಬಳ್ಳಾಪುರಚಿಂತಾಮಣಿಡಿ ಕೆ ಶಿವಕುಮಾರ್ಧಾನ್ಯಗಳ ಅಡಮಾನಧಾನ್ಯಗಳ ದಾಸ್ತಾನುಬಸವರಾಜ ಬೊಮ್ಮಾಯಿಬ್ಯಾಂಕ್‌ಗಳಿಂದ ಸಾಲ ಎತ್ತುವಳಿಮಧ್ಯಂತರ ವರದಿರಜನೀಶ್‌ ಗೋಯಲ್ಲೆಕ್ಕ ಪರಿಶೋಧನೆಸಹಕಾರ ಇಲಾಖೆಸಿದ್ದರಾಮಯ್ಯ
Advertisement Banner
Previous Post

40 ಪರ್ಸೆಂಟ್‌ ಕಮಿಷನ್‌ ಹಗರಣಕ್ಕೆ ಕ್ಲೀನ್‌ ಚಿಟ್‌; ತನಿಖೆ ನಡೆಸದೆಯೇ ಮಣ್ಣೆಳೆದು ಮುಚ್ಚಿ ಹಾಕಿದ ಸರ್ಕಾರ

Next Post

ಪಿಎಸ್‌ಐ ನೇಮಕಾತಿ ಅಕ್ರಮದ ಮತ್ತೊಂದು ಮುಖ; ಹುದ್ದೆಗಳೇ ಇಲ್ಲದಿದ್ದರೂ ಹೊರಡಿಸಿತ್ತೇ ಅಧಿಸೂಚನೆ?

thefilestack

thefilestack

Next Post

ಪಿಎಸ್‌ಐ ನೇಮಕಾತಿ ಅಕ್ರಮದ ಮತ್ತೊಂದು ಮುಖ; ಹುದ್ದೆಗಳೇ ಇಲ್ಲದಿದ್ದರೂ ಹೊರಡಿಸಿತ್ತೇ ಅಧಿಸೂಚನೆ?

Recommended

ಗ್ಯಾರಂಟಿ ಮೌಲ್ಯಮಾಪನ, ನಿರಂತರ ಸಂವಹನ ಸೇವೆ; ರೈಟ್‌ ಪೀಪಲ್‌ಗೆ 9.25 ಕೋಟಿ ವೆಚ್ಚಕ್ಕೆ 4(ಜಿ) ವಿನಾಯಿತಿ

2 years ago

ಸ್ವಚ್ಛಭಾರತ್‌ ಸೇರಿ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಬಿಡುಗಡೆಯಾಗದ 921 ಕೋಟಿ;ತುಟಿ ಬಿಚ್ಚದ ಸರ್ಕಾರ

4 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd