the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಕಾಮೆಡ್‌ ಕೆ 2023; ಪಟ್ಟಭದ್ರ ಹಿತಾಸಕ್ತಿಗಳಿಂದ ಸೀಟ್‌ ಬ್ಲಾಕಿಂಗ್‌ ಆರೋಪ, ಕೈಕಟ್ಟಿ ಕುಳಿತ ಸರ್ಕಾರ

thefilestack by thefilestack
August 31, 2023
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು; ಕಾಮೆಡ್‌ ಕೆ ಮೂಲಕ ಉತ್ತಮ ಕಾಲೇಜು ಮತ್ತು ತಮ್ಮ ಆಯ್ಕೆಯ ಕೋರ್ಸ್‌ಗಳು ದೊರಕಬಹುದು ಎಂದು ಕಾತುರದಿಂದ ಕಾಯುತ್ತಿದ್ದ ವಿದ್ಯಾರ್ಥಿಗಳ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ತಮ್ಮ ಆಯ್ಕೆಯ ಕೋರ್ಸ್‌ಗಳು ದೊರಕದ ಕಾರಣ ಕಾಮೆಡ್ ಕೆ ಮೂಲಕ ಪ್ರವೇಶಕ್ಕೆ ನಿರೀಕ್ಷಿಸಿದ್ದ ಸಾವಿರಾರು ವಿದ್ಯಾರ್ಥಿಗಳೂ ಇದೀಗ ಅತಂತ್ರರಾಗಿದ್ದಾರೆ.

 

ಅಲ್ಲದೇ ಕಾಮೆಡ್‌ ಕೆ ಈ ಬಾರಿಯ ಮೂರನೇ ಸುತ್ತಿನ ಕಟ್‌ ಅಫ್‌ ನ್ನು ಕಳೆದ ವರ್ಷದ ಮೂರನೇ ಸುತ್ತಿನ ಕಟ್‌ ಆಫ್‌ಗೆ ಹೋಲಿಸಿದರೆ ವಿದ್ಯಾರ್ಥಿಗಳಿಗೆ ಅನ್ಯಾಯವಾದಂತಾಗಿದೆ ಎಂದು ಹಲವು ಪೋಷಕರು ಆರೋಪಿಸಿದ್ಧಾರೆ.

 

ಈ ಕುರಿತು ‘ದಿ ಫೈಲ್‌’ ಗೆ ಪ್ರತಿಕ್ರಿಯೆ ನೀಡಿರುವ ಪೋಷಕರೊಬ್ಬರು ಕಾಮೆಡ್ ಕೆ ಯಲ್ಲಿ ಕೂಡ ಸೀಟ್ ಬ್ಲಾಕ್ ಮಾಡಲಾಗಿದೆ ಎಂದು ಆಪಾದಿಸಿದ್ದಾರೆ.

 

ಕಾಮೆಡ್‌ ಕೆ ಮತ್ತು ಕೆಇಎನಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಕೈ ಚಳಕ ತೋರಿಸುತ್ತಿದ್ದರೂ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್‍‌ ಅವರು ಇದುವರೆಗೂ ಈ ಬಗ್ಗೆ ಗಮನಹರಿಸಿಲ್ಲ ಎಂದು ತಿಳಿದು ಬಂದಿದೆ.

 

ಪ್ರತಿಯೊಂದು ಕಾಲೇಜಿನಲ್ಲೂ ಕಳೆದ ವರ್ಷದ ಕಟ್ ಆಫ್ ಗಿಂತ ಈ ಬಾರಿ ಕಟ್ ಆಫ್ ಶೇ.50 ರಷ್ಟು ಕಡಿಮೆ ಆಗಿದೆ. ಉದಾಹರಣೆಗೆ ಎಸ್‌ಜೆಬಿಐಐಟಿ ಕಾಲೇಜಿನಲ್ಲಿ ಕಳೆದ ವರ್ಷ ಕಂಪ್ಯೂಟರ್ ಸೈನ್ಸ್ 52000 + ರಾಂಕ್ ಇದ್ದರೇ ಈ ಬಾರಿ ಇದು ಕೇವಲ 27,000 + ಅಗಿದೆ. ಇದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪ್ರವೇಶ ನೀರಿಕ್ಷಿಸುತ್ತಿರುವ ವಿದ್ಯಾರ್ಥಿಗಳು ಕಾಮೆಡ್ ಕೆ ಯಲ್ಲಿ ಕೂಡ ಸೀಟ್ ಬ್ಲಾಕ್ ಮಾಡಿರುವುದಕ್ಕೆ ಇದೊಂದು ನಿದರ್ಶನ ಎಂದು ವಿವರಿಸುತ್ತಾರೆ ಪೋಷಕರೊಬ್ಬರು.

 

2023ನೇ ಸಾಲಿನ ಪ್ರವೇಶ ಪ್ರಕ್ರಿಯೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ತಾಂತ್ರಿಕ ಹಾಗೂ ಆಡಳಿತ್ಮಾತಕ ತೊದರೆಯಿಂದಾಗಿ ಮೊದಲ ಸುತ್ತು ಪ್ರವೇಶದ ಫಲಿತಾಂಶವನ್ನು ಆಗಸ್ಟ್ ತಿಂಗಳ ಎರಡನೇ ವಾರದಲ್ಲಿ ಪ್ರಕಟಿಸಿತ್ತು . ಈಗ ಎರಡೆನೇ ಸುತ್ತಿನ ಪ್ರವೇಶಕ್ಕೆ ಸಿದ್ಧತೆ ನಡೆಸಿದೆ.

 

ಈ ಮಧ್ಯೆ ಕಾಮೆಡ್ ಕೆ ಆಗಸ್ಟ್ 25ರಂದು ಮೂರನೇ ಸುತ್ತಿನ ಪ್ರವೇಶ ವನ್ನು ಪ್ರಕಟಿಸಿ, ಇನ್ನು ಮುಂದೆ ಮತ್ತಾವ ಸುತ್ತು ಇಲ್ಲ ಎಂದು ಹೇಳಿದೆ. ಹಾಗೆಯೇ ಮೂರನೇ ಸುತ್ತಿನಲ್ಲಿ ಖಾಲಿ ಉಳಿಯುವ ಸೀಟುಗಳನ್ನು ಆಯಾಯ ಸಂಸ್ಥೆಗಳಿಗೆ ಆಡಳಿತ ಮಂಡಳಿ ಕೋಟಾ ಮೂಲಕ ಭರ್ತಿ ಮಾಡಲು ವಾಪಸು ನೀಡುವುದಾಗಿ ಘೋಷಿಸಿದೆ.

 

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ 2ನೇ ಸುತ್ತಿನ ಸುತ್ತಿನ ಪ್ರವೇಶ ಪ್ರಕಟಿಸದ ನಂತರ ಕಾಮೆಡ್ ಕೆ ಯಲ್ಲಿ ಬಹಳಷ್ಟು ಸೀಟುಗಳು ಖಾಲಿಯಾಗುವ ಸಾಧ್ಯತೆಗಳೇ ಹೆಚ್ಚಿವೆ ಎನ್ನಲಾಗುತ್ತಿದೆ.

 

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಉತ್ತಮ ಕಾಲೇಜು ಸಿಗದೇ ಕಾಮೆಡ್ ಕೆ ಮೂಲಕ ಉತ್ತಮ ಕಾಲೇಜು/ಕೋರ್ಸ್ ನೀರಿಕ್ಷೆ ಮಾಡುತ್ತಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ಘೋರ ಅನ್ಯಾಯವಾಗಿದೆ ಎಂದೂ ಪೋಷಕರೊಬ್ಬರು ಆಪಾದಿಸುತ್ತಾರೆ.

 

 

ಕಳೆದ ವರ್ಷಗಳಲ್ಲಿ ಕಾಮೆಡ್ ಕೆ ಮೂರನೇ ಸುತ್ತಿನ ಪ್ರವೇಶವನ್ನು ನವೆಂಬರ್ ತಿಂಗಳಲ್ಲಿ ನಡೆಸಿತ್ತು. ಆದರೆ ಈ ವರ್ಷ ಅತ್ಯವಸರದಿಂದ ಮೂರನೇ ಸುತ್ತನ್ನು ಆರಂಭಿಸಿದೆ. ಈ ಅವಸರದ ಹಿಂದೆ ಪಟ್ಟಭದ್ರರ ಹಿತಾಸಕ್ತಿ ಅಡಗಿದೆ ಎಂದು ಅನುಮಾನಿಸುತ್ತಾರೆ ವಿದ್ಯಾರ್ಥಿಗಳು.

 

 

ಕೆಇಎ ನ 2ನೇ ಸುತ್ತಿನ ಫಲಿತಾಂಶ ಪ್ರಕಟವಾದ ನಂತರ ಕಾಮೆಡ್ ಕೆ ಮತ್ತೊಂದು ಸುತ್ತು ಪ್ರವೇಶ ಪ್ರಕ್ರಿಯೆ ಆರಂಭಿಸಬೇಕು. ಈಗಾಗಲೇ ಕಾಮೆಡ್ ಕೆ ಮೂರನೇ ಸುತ್ತಿನಲ್ಲಿ ಭಾಗವಹಿಸಿ, ಇನ್ನೂ ಉತ್ತಮ ಕಾಲೇಜು/ಕೋರ್ಸ್‌ಗೆ ಕಾಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿ ಕೊಡಲು ಕಾಮೆಡ್ ಕೆ ಮೇಲೆ ಒತ್ತಡ ಹೇರಬೇಕು ಎನ್ನುತ್ತಾರೆ ಪೋಷಕರು.

Tags: Comed KD K ShivakumarDR M C SudhakarEngeneeringh d kumarswamyHigher EducationKarnataka Examination AuthoritymedicalRajamma Chowda ReddyResultSiddaramaiahaStudentsಇಂಜಿನಿಯರಿಂಗ್‌ಕರ್ನಾಟಕಕಾಮೆಡ್‌ ಕೆಖಾಸಗಿ ಸಂಸ್ಥೆಗಳುಡಾ ಎಂ ಸಿ ಸುಧಾಕರ್‌ಪಟ್ಟಭದ್ರ ಹಿತಾಸಕ್ತಿಪರೀಕ್ಷಾಪ್ರವೇಶ ಪ್ರಕ್ರಿಯೆಪ್ರವೇಶ ಸುತ್ತಪ್ರಾಧಿಕಾರವೈದ್ಯಕೀಯಸಿದ್ದರಾಮಯ್ಯಸೀಟ್‌ ಬ್ಲಾಕಿಂಗ್‌ಸೀಟ್‌ ಮ್ಯಾಟ್ರಿಕ್ಸ್‌
Advertisement Banner
Previous Post

ಸಿಎಂ ಸಚಿವಾಲಯದ ಅಧೀನ ಕಾರ್ಯದರ್ಶಿ ಎತ್ತಂಗಡಿ; ಸಚಿವರ ಒತ್ತಡ, ಹುದ್ದೆಯೇ ಇಲ್ಲದ ಜಾಗಕ್ಕೆ ವರ್ಗಾ

Next Post

204 ಕೋಟಿ ರು. ಮೊತ್ತದ ಕಾಮಗಾರಿಗಳಿಗೆ ಪ್ರಸ್ತಾವನೆ; ಆರ್ಥಿಕ ಇಲಾಖೆ ಸುತ್ತೋಲೆ ಬದಿಗೊತ್ತಿ ಮೌಖಿಕ ಸೂಚನೆ

thefilestack

thefilestack

Next Post

204 ಕೋಟಿ ರು. ಮೊತ್ತದ ಕಾಮಗಾರಿಗಳಿಗೆ ಪ್ರಸ್ತಾವನೆ; ಆರ್ಥಿಕ ಇಲಾಖೆ ಸುತ್ತೋಲೆ ಬದಿಗೊತ್ತಿ ಮೌಖಿಕ ಸೂಚನೆ

Recommended

ಸಿಎಂ ಇಲಾಖೆಯಲ್ಲೇ ವಿಲೇವಾರಿಗೆ 3,351 ಕಡತ ಬಾಕಿ; ನೂರು ದಿನ ಪೂರೈಸಿದ್ದರೂ ಚುರುಕಿಲ್ಲ

4 years ago

3,092 ಎಕರೆ ಡಿನೋಟಿಫಿಕೇಷನ್‌; ಕೇಂದ್ರ ಸರ್ಕಾರದ ಅನುಮತಿಯಿಲ್ಲ, ಹೈಕೋರ್ಟ್‌ ತೀರ್ಪು ಪಾಲನೆಯೂ ಇಲ್ಲ

3 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd