the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home LEGISLATURE

ಕೇಂದ್ರ ಪುರಸ್ಕೃತ, ಸಾಮಾಜಿಕ ಭದ್ರತೆ ಯೋಜನೆ; 7,997 ಕೋಟಿ ರು. ಖರ್ಚು ಮಾಡದೇ ಬಾಕಿ ಇರಿಸಿದ್ದ ಸರ್ಕಾರ

thefilestack by thefilestack
December 18, 2023
in LEGISLATURE
0
0
SHARES
1
VIEWS
Share on FacebookShare on Twitter

ಬೆಂಗಳೂರು; ಕೇಂದ್ರ ಪುರಸ್ಕೃತ ಯೋಜನೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸಂಬಂಧಿಸಿದಂತೆ 2022-23ನೇ ಸಾಲಿನ ಅಂತ್ಯಕ್ಕೆ ಬಿಡುಗಡೆಯಾದ ಅನುದಾನದಲ್ಲೇ ಹಿಂದಿನ ಬಿಜೆಪಿ ಸರ್ಕಾರವು ಖರ್ಚು ಮಾಡದೇ 7,997 ಕೋಟಿ ರು. ಬಾಕಿ ಉಳಿಸಿಕೊಂಡಿತ್ತು ಎಂಬುದು ಇದೀಗ ಬಹಿರಂಗವಾಗಿದೆ.

 

ಕೇಂದ್ರ ಸರ್ಕಾರವು ಮಾರ್ಚ್‌ ತಿಂಗಳ ಅಂತ್ಯದಲ್ಲಿ ಸುಮಾರು 4,156 ಕೋಟಿ ರು. ಅನುದಾನವನ್ನು ಯೋಜನೆಗಳಿಗೆ ಬಿಡುಗಡೆ ಮಾಡಿತ್ತು. ಆದ್ದರಿಂದ 2022-23 ಅಂತ್ಯಕ್ಕೆ ಖರ್ಚಾಗದೇ ಉಳಿದ ಅನುದಾನದ ಮೊತ್ತವೇ ಹೆಚ್ಚಾಗಿರುತ್ತದೆ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರವು ಸದನಕ್ಕೆ ಉತ್ತರ ಒದಗಿಸಿದೆ.

 

2022-23ರಲ್ಲಿ ಕೇಂದ್ರ ಯೋಜನೆಗಳಿಗೆ ಭಾರತ ಸರ್ಕಾರವು ನೇರವಾಗಿ ಅನುಷ್ಠಾನ ಇಲಾಖೆಗಳಿಗೆ 6,739 ಕೋಟಿ ರು. ಜಮೆ ಮಾಡಿದೆ. ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಹೊರತುಪಡಿಸಿ 2022-23ರಲ್ಲಿ ಕೇಂದ್ರದಿಂದ ಹಣಕಾಸು ಆಯೋಗದ ಅನುದಾನ ಹಾಗೂ ಎಸ್‌ಡಿಆರ್‍‌ಎಫ್‌ ಮತ್ತು ಎನ್‌ಡಿಆರ್‍‌ಎಫ್‌ಗೆ ಒಟ್ಟು 4,435 ಕೋಟಿ ರು. ಅನುದಾನ ಬಿಡುಗಡೆಯಾಗಿದೆ ಎಂದು ಸಿದ್ದರಾಮಯ್ಯ ಅವರು ವಿಧಾನ ಪರಿಷತ್‌ನಲ್ಲಿ ಯು ಬಿ ವೆಂಕಟೇಶ್‌ ಅವರಿಗೆ ಉತ್ತರ ಒದಗಿಸಿದ್ದಾರೆ.

 

ಕೇಂದ್ರ ಸರ್ಕಾರವು ಯೋಜನೆಗಳಿಗೆ ನೀಡುವ ಅನುದಾನದಲ್ಲಿ ಖರ್ಚಾಗದೇ ಉಳಿದ ಮೊತ್ತವು ಮುಂದಿನ ಆರ್ಥಿಕ ವರ್ಷದ ಆರಂಭಿಕ ಶುಲ್ಕವಾಗಲಿದೆ. ಈ ಮೊತ್ತವನ್ನ ಕೇಂದ್ರ ಸರ್ಕಾರವು ಹಿಂಪಡೆಯುವುದಿಲ್ಲ. ಬದಲಿಗೆ ಮುಂದಿನ ಆರ್ಥಿಕ ವರ್ಷದಲ್ಲಿ ಕೇಂದ್ರದ ಯೋಜನೆಗಳಿಗೆ ಈ ಅನುದಾನವನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ಒದಗಿಸಿದೆ.

 

ಕೇಂದ್ರದಿಂದ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಆರ್ಥಿಕ ಇಲಾಖೆಯ ವತಿಯಿಂದ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಇಲಾಖೆಗಳೊಂದಿಗ ನಿರಂತರ ಸಭೆಗಳನ್ನು ಮಾಢಿ ಅನುದಾನವನ್ನು ತ್ವರಿತವಾಗಿ ಉಪಯೋಗಿಸಿಕೊಳ್ಳಲು ಸೂಚಿಸಿದೆ.

 

2023-24ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿಗೆ ನವೆಂಬರ್‍‌ ಅಂತ್ಯಕ್ಕೆ 10,337 ಕೋಟಿ ರು. ಬಿಡುಗಡೆ ಮಾಡಿದೆ. ಆದರೆ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಶೂನ್ಯ ಬಿಡುಗಡೆ ಮಾಡಿದೆ. ಭಾರತ ಸರ್ಕಾರವು ನೇರವಾಗಿ ಅನುಷ್ಠಾನ ಇಲಾಖೆಗಳ ಖಾತೆಗೆ 4,191 ಕೋಟಿ ರು.ಗಳನ್ನು ಜಮೆ ಮಾಡಿದೆ.

 

2018-19ರಲ್ಲಿ 30,406 ಕೋಟಿ (ಕೇಂದ್ರ ಮತ್ತು ರಾಜ್ಯದ ಪಾಲು) 2019-20ರ್‍ಲಿ 30,041 ಕೋಟಿ ರು., 2020-21ರಲ್ಲಿ 30,202 ಕೋಟಿ ರು., 2021-22ರಲ್ಲಿ 36,956 ಕೋಟಿ ರು., 2022-23ರಲ್ಲಿ 30,965 ಕೋಟಿ ರು ಖರ್ಚು ಮಾಡಿದೆ.

 

2018-19ರಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿಗೆ 9,872 ಕೋಟಿ ರು., ಸಾಮಾಜಿಕ ಭದ್ರತಾ ಯೋಜನೆಗಳಿಗೆ 522 ಕೋಟಿ ರು. ಅನುದಾನ ನೀಡಿತ್ತು. 2019-20ರಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿಗೆ 11,868 ಕೋಟಿ ರು., ಸಾಮಾಜಿಕ ಭದ್ರತಾ ಯೋಜನೆಗಳಿಗೆ 522 ಕೋಟಿ ರು., 2020-21ರಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿಗೆ 9,375 ಕೋಟಿ ರು., ಸಾಮಾಜಿಕ ಭದ್ರತಾ ಯೋಜನೆಗಳಿಗೆ 665 ಕೋಟಿ ರು., 2021-22ರಲ್ಲಿ ಕೇಂದ್ರ ಸರ್ಕಾರದ 12,176 ಕೋಟಿ ರು., ಸಾಮಾಜಿಕ ಭದ್ರತಾ ಯೋಜನೆಗಳಿಗೆ 494 ಕೋಟಿ ರು., 2022-23ರಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿಗೆ 17,960 ಕೋಟಿ ರು., ಸಾಮಾಜಿಕ ಭದ್ರತಾ ಯೋಜನೆಗಳಿಗೆ 447 ಕೋಟಿ ರು. ನೀಡಿದೆ.

 

ಕೇಂದ್ರ ಸರ್ಕಾರವು ಯೋಜನೆಗಳಿಗೆ ಬಾಕಿ ಉಳಿದಿರುವ ಅನುದಾನವನ್ನು ಬಿಡುಗಡೆ ಮಾಡಲು ಸಂಬಂಧಿಸಿದ ಯೋಜನೆಗಳ ಎಸ್‌ಎನ್‌ಎ ಖಾತೆಗಳಲ್ಲಿ ಉಳಿದಿರುವ ಬಾಕಿಯನ್ನು ಖರ್ಚು ಮಾಡುವಂತೆ ಆಡಳಿತ ಇಲಾಖೆಗಳಿಗೆ ಸೂಚಿಸಲಾಗಿದೆ. ಅಲ್ಲದೇ ಆರ್ಥಿಕ ಇಲಾಖೆಯಿಂದ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಆಡಳಿತ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸಿದ್ದಾರೆ.

Tags: Basavaraj BommaiBJP governmentCentral SponseredcongressD K ShivakumarFinancial Yeargrantsh d kumarswamyProgrammesSenior CitizensSiddaramaiahaSocial Securityಕಾಂಗ್ರೆಸ್‌ಕಾರ್ಯಕ್ರಮಗಳುಕೇಂದ್ರಡಿ ಕೆ ಸಿವಕುಮಾರ್‌ಪುರಸ್ಕೃತಬಸವರಾಜ ಬೊಮ್ಮಾಯಿಬಿಜೆಪಿ ಸರ್ಕಾರಭದ್ರತೆಯು ಬಿ ವೆಂಕಟೇಶ್‌ಯೋಜನೆವಿಧಾನ ಪರಿಷತ್‌ವಿಧಾನಸಭೆಸಾಮಾಜಿಕಸಿದ್ದರಾಮಯ್ಯಹಣಕಾಸು ವರ್ಷಹಿರಿಯ ನಾಗರಿರುಹೆಚ್‌ ಡಿ ಕುಮಾರಸ್ವಾಮಿ
Advertisement Banner
Previous Post

ಹಿಂದೂಮಹಾಸಭಾ, ವಾಟಾಳ್‌, ಕೆಆರ್‍‌ಎಸ್‌, ಪ್ರಜಾಕೀಯ, ಕಲ್ಯಾಣ ರಾಜ್ಯ ಪ್ರಗತಿ ಸೇರಿ 110 ಪಕ್ಷಗಳಿಗಿಲ್ಲ ಮಾನ್ಯತೆ

Next Post

ಶಾಲಾ ದಾಖಲೆಯಲ್ಲಿ ಕಾಡು ಕುರುಬ ನಮೂದು; ಸಿಎಂ ಜಂಟಿ ಕಾರ್ಯದರ್ಶಿ ವಿರುದ್ಧ ದೂರು, ವರ್ಷದಲ್ಲೇ ಕ್ಲೀನ್‌ ಚಿಟ್‌

thefilestack

thefilestack

Next Post

ಶಾಲಾ ದಾಖಲೆಯಲ್ಲಿ ಕಾಡು ಕುರುಬ ನಮೂದು; ಸಿಎಂ ಜಂಟಿ ಕಾರ್ಯದರ್ಶಿ ವಿರುದ್ಧ ದೂರು, ವರ್ಷದಲ್ಲೇ ಕ್ಲೀನ್‌ ಚಿಟ್‌

Recommended

ಅನ್ನಭಾಗ್ಯ ಹಣಪಾವತಿಯಲ್ಲಿ ವಿಳಂಬ; ಛತ್ತೀಸ್‌ಗಡ್‌ ಆಹಾರ ನಿಗಮಕ್ಕೆ 5.25 ಕೋಟಿ ಬಡ್ಡಿ ಪಾವತಿ

4 years ago

ನಗರ ಅನಿಲ ವಿತರಣೆ ಜಾಲ ನೀತಿ; 5,000 ಕೋಟಿ ಆದಾಯ ಖೋತಾ, ಸಂಪುಟವನ್ನೂ ದಾರಿತಪ್ಪಿಸಿದ ಇಲಾಖೆ

2 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd