the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಗುತ್ತಿಗೆದಾರರಿಗೆ 1.87 ಕೋಟಿ ಹೆಚ್ಚುವರಿ ಪಾವತಿ; ಸಿಎಜಿ ಗೌಪ್ಯ ಪತ್ರ ಬಹಿರಂಗ

thefilestack by thefilestack
January 24, 2023
in GOVERNANCE
0
0
SHARES
1
VIEWS
Share on FacebookShare on Twitter

ಬೆಂಗಳೂರು; ಒಳಾಡಳಿತ ಇಲಾಖೆ ವ್ಯಾಪ್ತಿಯಲ್ಲಿ ಬರುವ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಗುತ್ತಿಗೆದಾರರಿಗೆ 1.87 ಕೋಟಿ ರು.ಗಳನ್ನು ಹೆಚ್ಚುವರಿಯಾಗಿ ಪಾವತಿಸಿರುವ ಪ್ರಕರಣವನ್ನು ಪ್ರಧಾನ ಮಹಾಲೇಖಪಾಲರು ಹೊರಗೆಡವಿದ್ದಾರೆ.

 

ಈ ಸಂಬಂಧ ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳಿಗೆ ಪ್ರಧಾನ ಮಹಾಲೇಖಪಾಲರ ಕಚೇರಿಯು 2022ರ ಡಿಸೆಂಬರ್‌ 14ರಂದು (D.O.No. AG (AU II) Reports/AMG-III/AR 2022/2022-23/144) ಗೌಪ್ಯ ಪತ್ರವನ್ನು ಬರೆದಿದೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ಕುರಿತಾದ ಮಾಹಿತಿಯನ್ನು ಗೌಪ್ಯವಾಗಿರಿಸಿಕೊಳ್ಳಬೇಕು ಅಲ್ಲದೇ 2022ರ ಜನವರಿ 11ರೊಳಗಾಗಿ ವಿವರಣೆಯನ್ನು ನೀಡಬೇಕು ಎಂದು ಪ್ರಧಾನ ಮಹಾಲೇಖಪಾಲರಾದ ವಿಮಲೇಂದ್ರ ಆನಂದ್‌ ಪಟವರ್ಧನ್‌ ಅವರು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ ರಜನೀಶ್‌ ಗೋಯಲ್‌ ಅವರಿಗೆ 2022 ಡಿಸೆಂಬರ್‌ 14ರಂದೇ ಪತ್ರ ಬರೆದಿದ್ದಾರೆ.

 

ಅಲ್ಲದೇ ಕರಡು ವರದಿಯನ್ನು ಇತ್ಯರ್ಥಗೊಳಿಸಲು ಅಥವಾ ಈ ವರದಿಯಲ್ಲಿ ರಾಜ್ಯ ಸರ್ಕಾರದ ಅಭಿಪ್ರಾಯಗಳನ್ನು ಸೇರಿಸಿಕೊಳ್ಳಲು ಸಾಧ್ಯವಾಗುವಂತೆ ಸೂಕ್ತ ಉತ್ತರಗಳನ್ನು ನಿಗದಿತ ಅವಧಿಯೊಳಗೆ ಪ್ರಧಾನ ಮಹಾಲೇಖಪಾಲರಿಗೆ ಸಲ್ಲಿಸಬೇಕು ಎಂದು ಆರ್ಥಿಕ ಇಲಾಖೆಯ ವಿತ್ತೀಯ ಸುಧಾರಣೆಯ ಸರ್ಕಾರದ ಕಾರ್ಯದರ್ಶಿ ಮಂಜು ಪ್ರಸನ್ನನ್‌ ಪಿಳ್ಳೈ ಅವರು 2022ರ ಡಿಸೆಂಬರ್‌ 22ರಂದು ಪತ್ರ ಬರೆದಿದ್ದಾರೆ.

 

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಧೀನದಲ್ಲಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಕಚೇರಿಗಳಿಗೆ ಹೌಸ್‌ಕೀಪಿಂಗ್‌ ಕನ್ಸೂಮಬೆಲ್ಸ್‌ ಸೇವೆ ಒದಗಿಸುವ ಸಂಬಂಧ ಕರೆದಿದ್ದ ಟೆಂಡರ್‌ ಪ್ರಕ್ರಿಯೆ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಒಳಾಡಳಿತ ಇಲಾಖೆಯು ಕೆಟಿಪಿಪಿ ಕಾಯ್ದೆ ಅನ್ವಯ ದಾಖಲಾತಿಗಳನ್ನು ಸರಿಯಾಗಿ ಪರಿಶೀಲಿಸಿಲ್ಲ ಎಂದು ಸಿಎಜಿ ಆಕ್ಷೇಪ ಎತ್ತಿದೆ.

 

ಟೆಂಡರ್‌ನಲ್ಲಿ ಭಾಗವಹಿಸಿದ್ದ 2 ಕಂಪನಿಗಳ ಪೈಕಿ ಲಿಬ್ರಾ ಡಿಟೆಕ್ಟಿವ್‌ ಅಂಡ್‌ ಸೆಕ್ಯುರಿಟಿ ಸರ್ವಿಸ್‌ನ ತಾಂತ್ರಿಕ ಬಿಡ್‌ನ್ನು ಇಲಾಖೆಯು ಅನುಮೋದಿಸಿತ್ತು. ಟೆಂಡರ್‌ನ್ನು 2020ರ ಸೆಪ್ಟಂಬರ್‌ನಲ್ಲಿ ಟೆಂಡರ್‌ ಕಾರ್ಯಾದೇಶ ನೀಡಿದ್ದರೇ ಅಕ್ಟೋಬರ್‌ನಲ್ಲಿ ಈ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು.

 

ಈ ಕಂಪನಿಯು ತನ್ನ ನೌಕರನಿಗೆ ತಲಾ 23,327 ರು.ಗಳನ್ನು ಮಾಸಿಕ ವೇತನವನ್ನು 2023ರ ಅಕ್ಟೋಬರ್‌ವರೆಗೂ ನೀಡಲು ಒಡಂಬಡಿಕೆಯಲ್ಲಿ ಹೇಳಲಾಗಿತ್ತು. ಈ ಸಂಬಂಧ ಆಗಸ್ಟ್‌- ಅಕ್ಟೋಬರ್‌ 2021ರ ಮಧ್ಯೆ ಲೆಕ್ಕ ಪರಿಶೋಧನೆ ಕೈಗೊಳ್ಳಲಾಗಿತ್ತು ಎಂಬುದು ಲಭ್ಯ ಇರುವ ದಾಖಲೆಯಿಂದ ತಿಳಿದು ಬಂದಿದೆ.

 

‘ಈ ವೇಳೆಯಲ್ಲಿ ಒಳಾಡಳಿತ ಇಲಾಖೆಯು ಪರಿಮಾಣ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದಂತೆ ಟೆಂಡರ್‌ ದಾಖಲಾತಿಗಳನ್ನು ನಿರ್ದಿಷ್ಟಪಡಿಸಿರಲಿಲ್ಲ. ಅಲ್ಲದೆ ಈ ಕಂಪನಿಯು ನಮೂದಿಸಿದ್ದ ದರವನ್ನು ವಿಶ್ಲೇಷಿಸಿರಲಿಲ್ಲ. ಆದರೂ ಟೆಂಡರ್‌ನ್ನು ಒಪ್ಪಿಕೊಂಡಿತ್ತು,’ ಎಂಬುದನ್ನು ಲೆಕ್ಕ ಪರಿಶೋಧನೆಯ ಕರಡು ಪ್ರತಿಯಿಂದ ತಿಳಿದು ಬಂದಿದೆ.

 

ಅಲ್ಲದೇ ಬಸವನಬಾಗೇವಾಡಿ, ಬೆಳಗಾವಿಯ ಬನ್ನಿಮಂಟಪ, ಗೋಣಿಕೊಪ್ಪ, ಹಾಸನ, ಚನ್ನರಾಯಪಟ್ಟಣ, ಸವದತ್ತಿ ಮತ್ತು ವಿಜಯಪುರದಲ್ಲಿನ ಕಚೇರಿಗಳಲ್ಲಿದ್ದ ಹೌಸ್‌ ಕೀಪಿಂಗ್‌ ಕನ್ಸೂಮಬಲ್‌ಗಳನ್ನು ಜಂಟಿ ಭೌತಿಕ ಸಮೀಕ್ಷೆಯನ್ನೂ ನಡೆಸಿರುವ ಲೆಕ್ಕಪರಿಶೋಧನಕಾರಿಗಳು ಮಾರುಕಟ್ಟೆಯಲ್ಲಿದ್ದ ಗರಿಷ್ಠ ದರಕ್ಕಿಂತಲೂ ಹೆಚ್ಚಿನ ದರವನ್ನು ಪಾವತಿಸಿರುವುದನ್ನು ಪತ್ತೆ ಹಚ್ಚಿದ್ದಾರೆ.

 

ಮಾರುಕಟ್ಟೆಯಲ್ಲಿ ಕನ್ಸೂಮಬಲ್‌ಗಳಿಗೆ 2,300 ದರವಿದ್ದರೇ ಅಗ್ನಿಶಾಮಕ ಅಧಿಕಾರಿಗಳು 2,200 ರು ಹೆಚ್ಚಳ ದರದಲ್ಲಿ ಅಂದರೆ 4,500 ರು.ದರದಲ್ಲಿ ಪ್ರತಿ ತಿಂಗಳೂ ಪಾವತಿಸಿದ್ದಾರೆ. ಮಾರುಕಟ್ಟೆಗಿಂತಲೂ ಹೆಚ್ಚಿನ ದರವನ್ನು 202ರ ಅಕ್ಟೋಬರ್‌ನಿಂದ 2022ರ ಜೂನ್‌ವರೆಗೂ ಪಾವತಿಸಿರುವ ಕಾರಣ 1,87 ಕೋಟಿಯಷ್ಟು ನಷ್ಟಕ್ಕೆ ಕಾರಣವಾದಂತಾಗಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.

 

ಟೆಂಡರ್‌ ಪ್ರಕ್ರಿಯೆಗಳಲ್ಲಿನ ಲೋಪಗಳ ಕುರಿತು ಸಿಎಜಿ ಕೇಳಿರುವ ವಿವರಣೆ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

Tags: Aaraga JnanendraacsAuditor GeneralBasavaraj BommaicagComptrollerConfenditialD K ShivakumardgpDr.Rajneesh GoelFire Servicesh d kumarswamyhome departmentPraveen SoodSiddaramaiahaTender Golmalಅಗ್ನಿಶಾಮಕ ಸೇವೆಆರಗ ಜ್ಞಾನೇಂದ್ರಒಳಾಡಳಿತ ಇಲಾಖೆಕರಡು ವರದಿಗೃಹ ಇಲಾಖೆಗೌಪ್ಯ ಪತ್ರಟೆಂಡರ್‌ ಗೋಲ್ಮಾಲ್‌ಡಾ ರಜನೀಶ್‌ ಗೋಯಲ್‌ಡಿ ಕೆ ಶಿವಕುಮಾರ್ಪ್ರವೀಣ್‌ ಸೂದ್‌ಬಸವರಾಜ ಬೊಮ್ಮಾಯಿಮಹಾಲೆಕ್ಕ ಪರಿಶೋಧಕರುಮಹಾಲೇಖಪಾಲರುವಿತ್ತೀಯ ಸುಧಾರಣೆಸಿಎಜಿಸಿದ್ದರಾಮಯ್ಯಹೆಚ್‌ ಡಿ ಕುಮಾರಸ್ವಾಮಿ
Advertisement Banner
Previous Post

ಸ್ಯಾಂಟ್ರೋ ರವಿಗೆ ಕೊಠಡಿ ಹಂಚಿಕೆಯಾಗಿಲ್ಲ, ಸಿಸಿಟಿವಿ ಪರಿಶೀಲನೆಯೂ ನಡೆದಿಲ್ಲ; ಮುನ್ನೆಲೆಗೆ ಬಂದ ಪತ್ರ

Next Post

ಖಾಸಗಿ ಸಂಸ್ಥೆಗಳಿಗೆ 1,000 ಎಕರೆ ಪರಿಹಾರಾತ್ಮಕ ಅರಣ್ಯ ಜಮೀನು; ತಡೆಹಿಡಿದಿದ್ದ ನೀತಿ ಪುನರ್‌ ಪರಿಶೀಲನೆ

thefilestack

thefilestack

Next Post
ಬಜೆಟ್‌ ಘೋಷಣೆ; ವೆಚ್ಚಕ್ಕೆ 15,460 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ,  ಸಾಧಿಸಿದ್ದು ಕೇವಲ ಶೇ.47ರಷ್ಟು

ಖಾಸಗಿ ಸಂಸ್ಥೆಗಳಿಗೆ 1,000 ಎಕರೆ ಪರಿಹಾರಾತ್ಮಕ ಅರಣ್ಯ ಜಮೀನು; ತಡೆಹಿಡಿದಿದ್ದ ನೀತಿ ಪುನರ್‌ ಪರಿಶೀಲನೆ

Recommended

ಶೈಕ್ಷಣಿಕ ವಲಯದೊಳಗೇ ಎಥನಾಲ್‌ ಕಾರ್ಖಾನೆ ಸ್ಥಾಪನೆ; ಡಿಸಿ ಶಿಫಾರಸ್ಸಿನ ಹಿಂದೆ ಸಂಸದ, ಸಚಿವರ ಒತ್ತಡ?

3 years ago

ಪುನೀತ್ ಕೆರೆಹಳ್ಳಿ ಬಂಧಮುಕ್ತ ಪ್ರಕರಣ; ಕಡತ ಒದಗಿಸಲು ನಿರಾಕರಿಸಿ, ಮಾಹಿತಿಯೇ ರಹಸ್ಯವೆಂದ ಸರ್ಕಾರ

2 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd