the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ವಿಧಾನಸೌಧ, ವಿಕಾಸ ಸೌಧದಲ್ಲಿ ಹೆಚ್ಚಿದ ಡೆಂಗಿ ಸೊಳ್ಳೆ ಸಂತಾನೋತ್ಪತ್ತಿ; 28 ಸಿಬ್ಬಂದಿಯಿಂದ ಸಮೀಕ್ಷೆ

thefilestack by thefilestack
October 27, 2023
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು; ರಾಜ್ಯಾದ್ಯಂತ ದಿನೇ ದಿನೆ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿರುವ ನಡುವೆಯೇ ವಿಧಾನಸೌಧ ಸೇರಿದಂತೆ ಸಚಿವಾಲಯದ ಕಟ್ಟಡಗಳಲ್ಲಿಯೂ ಡೆಂಗಿ ಸಂತಾನೋತ್ಪತ್ತಿ ಸೊಳ್ಳೆಗಳ ಹಾವಳಿಯೂ ಹೆಚ್ಚಿದೆ.

 

ಸಚಿವಾಲಯದ ಕಟ್ಟಡಗಳಲ್ಲಿ ಡೆಂಗಿ  ಸಂತಾನೋತ್ಪತ್ತಿ ಸೊಳ್ಳೆಗಳ ಹಾವಳಿ ಸಮೀಕ್ಷೆ ಕುರಿತಂತೆ 28 ಜನ ಸಿಬ್ಬಂದಿಗಳೊಂದಿಗೆ ಲಾರ್ವಾ ಸಮೀಕ್ಷೆ ನಡೆಸಿತ್ತು ಎಂಬುದು ತಿಳಿದು ಬಂದಿದೆ.

 

ಪ್ರಮುಖವಾಗಿ ವಿಧಾನಸೌಧ, ವಿಕಾಸಸೌಧ ಕಟ್ಟಡ ಮತ್ತು ಇದಕ್ಕೆ ಹೊಂದಿಕೊಂಡಿರುವ ಜಾಗಗಳಲ್ಲಿ ಅತಿ ಹೆಚ್ಚು ನೀರು ನಿಲ್ಲುತ್ತಿರುವುದರಿಂದಾಗಿ ಡೆಂಗಿ ಸಂತಾನೋತ್ಪತ್ತಿ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಅಧಿಕಾರಿಗಳಿಗೆ ಪತ್ರ (ಸಿಆಸುಇ 131 ಡಿಬಿಎಂ 2023) ಬರೆದಿದೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

ಸಚಿವಾಲಯದ ಕಟ್ಟಡಗಳಲ್ಲಿ ಡೆಂಗಿ ಸಂತಾನೋತ್ಪತ್ತಿ ಸೊಳ್ಳೆಗಳ ನಿಯಂತ್ರಣದ ಕುರಿತು ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ 28 ಜನ ಸಿಬ್ಬಂದಿಗಳೊಂದಿಗೆ ಸಮೀಕ್ಷೆ ನಡೆಸಲಾಗಿತ್ತು. ವಿಧಾನಸೌಧ, ವಿಕಾಸಸೌಧ ಸ್ಥಳವು ಪಾಸಿಟಿವ್‌ ಪ್ರದೇಶಗಳಾಗಿವೆ. ಡೆಂಗಿ ಸಂತಾನೋತ್ಪತ್ತಿ ಸೊಳ್ಳೆಗಳನ್ನು ನಿಯಂತ್ರಿಸುವ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ಪ್ರಸ್ತಾಪಿಸಿದ್ದಾರೆ.

 

ವಿಧಾನಸೌಧದ ಪೂರ್ವ ದ್ವಾರದ ಬಳಿ ಎರಡು ಕಾರಂಜಿಗಳಲ್ಲಿ ನಿಂತ ನೀರು, ಪ್ರವೇಶದ್ವಾರದ ಬಳಿ ಭದ್ರತಾ ನಾಯಿಗಳಿಗಾಗಿ 06 ನೀರಿನ ಕ್ಯಾನ್‌ಗಳನ್ನು ಇರಿಸಿರುವುದು, ಕಚೇರಿ ಆವರಣದ ಒಳಗೆ 13+/93 ಕಾರಿಡಾರ್‍‌, ಗ್ರಂಥಾಲಯದಲ್ಲಿ 6+/25 ಒಳಾಂಗಣದ ಕುಂಡದಲ್ಲಿ ಸಸ್ಯಗಳು ಪಾಸಿಟಿವ್ ಪ್ರದೇಶಗಳಾಗಿವೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ವಿಧಾನಸೌಧದ ಉಪ ಪೊಲೀಸ್‌ ಆಯುಕ್ತರು, ಹಿರಿಯ ಆರೋಗ್ಯ ಪರಿವೀಕ್ಷಕರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ತೋಟಗಾರಿಕೆ ನಿರ್ದೇಶಕರು ಸೇರಿದಂತೆ ಹಲವು ಅಧಿಕಾರಿಗಳಿಗೆ ಪತ್ರದಲ್ಲಿ ತಿಳಿಸಿರುವುದು ತಿಳಿದು ಬಂದಿದೆ.

 

‘ವಿಧಾನಸೌಧ, ವಿಕಾಸಸೌಧ ಬಳಿ ನೀರು ನಿಲ್ಲದಂತೆ ಕ್ರಮ ಕೈಗೊಂಡು ಡೆಂಗಿ ಸಂತಾನೋತ್ಪತ್ತಿ ಸೊಳ್ಳೆಗಳನ್ನು ನಿಯಂತ್ರಿಸುವ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು,’ ಎಂದು ನಿರ್ದೇಶಿಸಿರುವುದು ಗೊತ್ತಾಗಿದೆ.

 

ಕಳೆದ 20 ದಿನದಲ್ಲಿ ಬೆಂಗಳೂರಿನಲ್ಲಿ 1,404 ಪ್ರಕರಣಗಳು ಡೆಂಗಿ  ಎಂದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಹೇಳಿತ್ತು. ಈ ವರ್ಷದ ಅ.1 ರವರೆಗೆ ಬೆಂಗಳೂರಿನಲ್ಲಿ 5,767 ಪ್ರಕರಣಗಳು ವರದಿಯಾಗಿದ್ದವು.

 

ಬೆಂಗಳೂರು ಹೊರತುಪಡಿಸಿ ರಾಜ್ಯದ ಉಳಿದ ಜಿಲ್ಲೆಗಳಲ್ಲಿಯೂ 4,505 ಪ್ರಕರಣಗಳು ವರದಿಯಾಗಿದ್ದವು. ಈ ಪ್ರಕರಣಗಳ ಸಂಖ್ಯೆ ಅ.20ರ ವೇಳೆಗೆ ಬೆಂಗಳೂರಿನಲ್ಲಿ 372 ಪ್ರಕರಣ ಹೆಚ್ಚಾಗಿದ್ದು, ಇದೀಗ ಒಟ್ಟು 6,139 ಡೆಂಗಿ  ಪ್ರಕರಣಗಳು ಕಂಡುಬಂದಿವೆ.

 

ರಾಜ್ಯದ ನಾನಾ ಭಾಗಗಳಲ್ಲಿ 4,505 ರಷ್ಟಿದ್ದ ಪ್ರಕರಣಗಳು 20 ದಿನಗಳಲ್ಲಿ 1,066 ಏರಿಕೆ ಕಂಡಿದೆ. ಒಟ್ಟು 5,571 ಪ್ರಕರಣಗಳು ವರದಿಯಾಗಿವೆ.

 

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಂಚಿಕೊಂಡ ಅಂಕಿಅಂಶಗಳ ಪ್ರಕಾರ ಈ ವರ್ಷ ಪುರಸಭೆ ವ್ಯಾಪ್ತಿಯಲ್ಲಿ ಡೆಂಗಿ  ಪ್ರಕರಣಗಳು ಹೆಚ್ಚುತ್ತಿವೆ. ಬಿಬಿಎಂಪಿಯಿಂದ 4,323 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.

 

 

ಜೂನ್‌ನಲ್ಲಿ 689 ಪ್ರಕರಣಗಳಿದ್ದರೆ, ಇದು ಆಗಸ್ಟ್‌ನಲ್ಲಿ 1,589 ಕ್ಕೆ ಏರಿದೆ. ಜುಲೈ ತಿಂಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 1,629 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರ ಪಾಲಿಕೆಯಿಂದ ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 8 ರವರೆಗೆ 416 ಡೆಂಗಿ  ಪ್ರಕರಣಗಳು ವರದಿಯಾಗಿವೆ.

 

2019 ರಲ್ಲಿ 44,863  ಡೆಂಗಿ ಪ್ರಕರಣಗಳಿದ್ದರೆ, 2020 ರಲ್ಲಿ 6,679 ಕ್ಕೆ ಇಳಿದಿದೆ . ಅಂತೆಯೇ, 2021 ರಲ್ಲಿ 6,166 ಪ್ರಕರಣಗಳು ಮತ್ತು 2022 ರಲ್ಲಿ 5,589 ಪ್ರಕರಣಗಳು ಕಂಡುಬಂದಿದ್ದವು.

Tags: D K ShivakumarDengueDPARh d kumarswamyLarvaSiddaramaiahaVidhana SoudhaVikas Soudhaಆಡಳಿತಆರೋಗ್ಯ ವಿಭಾಗಇಲಾಖೆಕಚೇರಿ ಆವರಣಕರ್ನಾಟಕ ನಗರಪಾಲಿಕೆಗಳ ಅಧಿನಿಯಮಕಾರಂಜಿಡಿ ಕೆ ಶಿವಕುಮಾರ್ನೀರಿನ ಕ್ಯಾನ್‌ನೀರುಪಾಲಿಕೆಪೊಲೀಸ್‌ ಆಯುಕ್ತರುಬಹು ಮಹಡಿ ಕಟ್ಟಡಬಿಬಿಎಂಪಿಬೃಹತ್‌ಬೆಂಗಳೂರುಭದ್ರತಾ ನಾಯಿಮಹಾನಗರವಿಕಾಸ ಸೌಧವಿಧಾನಸೌಧಸಂತಾನೋತ್ಪತ್ತಿಸಿಬ್ಬಂದಿಸುಧಾರಣೆಸೊಳ್ಳೆಗಳ ಹಾವಳಿಹೂವಿನ ಕುಂಡಹೆಚ್‌ ಡಿ ಕುಮಾರಸ್ವಾಮಿ
Advertisement Banner
Previous Post

ಪುನೀತ್ ಕೆರೆಹಳ್ಳಿ ಬಂಧಮುಕ್ತ ಪ್ರಕರಣ; ಕಡತ ಒದಗಿಸಲು ನಿರಾಕರಿಸಿ, ಮಾಹಿತಿಯೇ ರಹಸ್ಯವೆಂದ ಸರ್ಕಾರ

Next Post

ರೋಸ್‌ಮೆರ್ಟಾ ಪ್ರಕರಣ; ಲಿಂಗಾಯತ ಸಮುದಾಯದ ನಿವೃತ್ತ ಐಪಿಎಸ್‌ ಅಧಿಕಾರಿ ವಿರುದ್ಧ ಸಿಐಡಿ ತನಿಖೆ?

thefilestack

thefilestack

Next Post

ರೋಸ್‌ಮೆರ್ಟಾ ಪ್ರಕರಣ; ಲಿಂಗಾಯತ ಸಮುದಾಯದ ನಿವೃತ್ತ ಐಪಿಎಸ್‌ ಅಧಿಕಾರಿ ವಿರುದ್ಧ ಸಿಐಡಿ ತನಿಖೆ?

Recommended

ಪಠ್ಯಕ್ರಮದಿಂದ ಹೊರತಾದ ಪ್ರಶ್ನೆ ಪ್ರಕರಣ; ಪ್ರಮಾದ ಬೆನ್ನಲ್ಲೇ ಎಸ್‌ಒಪಿ ರೂಪಿಸಲು ಸಮಿತಿ ರಚನೆ

2 years ago

ಆಂಫೊಟೆರಿಸಿನ್‌ ಕೊರತೆ; ಉತ್ಪಾದನೆ ಹೆಚ್ಚಳವಾದರೂ ರಾಜ್ಯಕ್ಕೆ ದೊರೆಯುವುದೇ 2.52 ಲಕ್ಷ ವಯಲ್‌?

5 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd