the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಲೆಕ್ಕಪರಿಶೋಧನೆಗೆ ಮಿತಿ; 100ಕ್ಕೂ ಅಧಿಕ ಸಂಘಗಳ ಪರಿಶೋಧನೆ ನಿರ್ವಹಣೆ ಬಹಿರಂಗ

thefilestack by thefilestack
December 25, 2021
in GOVERNANCE
0
0
SHARES
1
VIEWS
Share on FacebookShare on Twitter

ಬೆಂಗಳೂರು; ರಾಜ್ಯದಲ್ಲಿರುವ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ನಿರ್ವಹಿಸುತ್ತಿರುವ ಒಬ್ಬೊಬ್ಬ ಸನ್ನದು ಲೆಕ್ಕ ಪರಿಶೋಧಕರು 100ಕ್ಕಿಂತ ಹೆಚ್ಚಿನ ಸಂಖ್ಯೆಯ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ನಿರ್ವಹಿಸುತ್ತಿದ್ದಾರೆ. ಹೀಗಾಗಿಯೇ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಗುಣಮಟ್ಟ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂಬ ಸಂಗತಿ ಇದೀಗ ಬಹಿರಂಗವಾಗಿದೆ.

ಸಹಕಾರ ಸಂಘಗಳ ಲೆಕ್ಕಪರಿಶೋಧನೆಗಾಗಿ ಸಂಘಗಳ ವ್ಯಾಪ್ತಿ ಮಿತಿಗೊಳಿಸುವ ಸಂಬಂಧ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರು ನ.6ರಂದು ಹೊರಡಿಸಿರುವ ಸುತ್ತೋಲೆ ಬಗ್ಗೆ ಸಹಕಾರ ಕ್ಷೇತ್ರದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸನ್ನದು ಲೆಕ್ಕ ಪರಿಶೋಧಕರು 100ಕ್ಕಿಂತ ಹೆಚ್ಚಿನ ಸಂಖ್ಯೆ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ನಡೆಸುತ್ತಿರುವುದು ಮುನ್ನೆಲೆಗೆ ಬಂದಿದೆ.

ನಿರ್ದೇಶಕರ ಪ್ಯಾನಲ್‌ನಲ್ಲಿರುವ ಸನ್ನದು ಲೆಕ್ಕ ಪರಿಶೋಧಕರು ರಾಜ್ಯದಲ್ಲಿನ ಯಾವುದೇ ಜಿಲ್ಲೆಯಲ್ಲಿರುವ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ಕೈಗೊಳ್ಳಬಹುದು. ಈ ರೀತಿ ಹಲವು ಸನ್ನದು ಲೆಕ್ಕ ಪರಿಶೋಧಕರು ಬೇರೆ ಬೇರೆ ಜಿಲ್ಲೆಗಳಲ್ಲಿ ಲೆಕ್ಕ ಪರಿಶೋಧನೆ ಕಖೈಗೊಂಡಿರುವ ಸಹಕಾರ ಸಂಘಗಳ ಅಂಕಿ ಸಂಖ್ಯೆಗಳನ್ನು ಕ್ರೋಢೀಕರಿಸಿದಲ್ಲಿ ಇದು 200 ಸಹಕಾರ ಸಂಘಗಳಿಗಿಂತಲೂ ಅಧಿಕ ಸಂಖ್ಯೆಯಲ್ಲಿವೆ.

‘ರಾಜ್ಯದಲ್ಲಿ ಸಹಕಾರ ಸಂಘಗಳ ಲೆಕ್ಕಪರಿಶೋಧನೆ ನಿರ್ವಹಿಸುತ್ತಿರುವ ಸನ್ನದು ಲೆಕ್ಕಪರಿಶೋಧಕರು 100ಕ್ಕಿಂತ ಹೆಚ್ಚಿನ ಸಂಖ್ಯೆಯ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ನಡೆಸುತ್ತಿದ್ದು ಇದರಿಂದಾಗಿ ಲೆಕ್ಕಪರಿಶೋಧನಾ ಗುಣಮಟ್ಟ ಗಣನೀಯವಾಗಿ ಕಡಿಮೆಯಾಗುತ್ತದೆ,’ ಎಂದು ಇಲಾಖೆ ಅಭಿಪ್ರಾಯಿಸಿದೆ.

ಹೀಗಾಗಿಯೇ ಬಹುತೇಕ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ವರದಿಗಳು ವರ್ಷಾಂತ್ಯದವರೆಗೂ ಇಲಾಖೆಗೆ ಸಲ್ಲಿಕೆಯಾಗುತ್ತಿಲ್ಲ ಎಂದು ಸಹಕಾರ ಸಂಘಗಳ ಇಲಾಖೆಯು ಪ್ರತಿಪಾದಿಸಿದೆ. ಈ ಸಂಬಂಧ ಸಿದ್ಧಪಡಿಸಿರುವ ವಿವರಣಾತ್ಮಕ ಟಿಪ್ಪಣಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

100ಕ್ಕೂ ಹೆಚ್ಚು ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ನಡೆಸಿರುವವರ ಪಟ್ಟಿ (2020-21)

ಡಿ ಟಿ ಪೂರ್ಣಚಂದ್ರ (ಮೈಸೂರು) – 126

ಸುಬ್ರಹ್ಮಣ್ಯ, ವೇಣುಗೋಪಾಲ್‌ರಾವ್ (ಮೈಸೂರು) – 153

ಎಚ್‌ ಆರ್‌ ಜಗನ್ನಾಥ್‌ (ಮೈಸೂರು)- 156

ಹರೀಶ್‌ ಗೌಡ (ಹಾಸನ) – 149

ಎಂ ಕೆ ಚಂದ್ರ (ಹಾಸನ) – 112

ಲಾವಣ್ಯ ಅಂಡ್‌ ಕೋ (ಹಾಸನ ) – 172

ಎನ್‌ ಬಿ ಮಠದ (ಬೆಳಗಾವಿ) – 183

ಸೈದಪ್ಪಾ ಗದಾಡಿ (ಬೆಳಗಾವಿ) – 186

ವಿ ಐ ಕರಾಡಕರ್‌ (ಬೆಳಗಾವಿ) – 137

ಜಿ ಎ ಮೆಕ್ಕಳಕಿ (ಬೆಳಗಾವಿ) – 128

ಅಶೋಕ್‌ ಸಂಕಣ್ಣನವರ್‌ (ಬೆಳಗಾವಿ) – 157

ಡಿ ವಿ ಡಾಗಾ ಅಂಡ್‌ ಕೋ (ಬಾಗಲಕೋಟೆ) -151

ಪ್ರವೀಣ್‌ ಕುಮಾರ್‌ (ಮಂಡ್ಯ) -167

ವಿಜಯಕುಮಾರ್‌ (ಮಂಡ್ಯ) – 164

ಕೆ ಗೋಪಾಲಕೃಷ್ಣ (ಬಳ್ಳಾರಿ ) 110

ವಿಶ್ವನಾಥ್‌ ಅಂಡ್‌ ಕೋ (ತುಮಕೂರು) 115

ಲೆಕ್ಕಪರಿಶೋಧನೆಗಾಗಿ ಸಂಘಗಳ ವ್ಯಾಪ್ತಿ ಮಿತಿಗೊಳಿಸುವ ಸಂಬಂಧ ಹೊರಡಿಸಿರುವ ಸುತ್ತೋಲೆಯನ್ನು ಸಮರ್ಥಿಸಿಕೊಂಡಿರುವ ಇಲಾಖೆಯು ಸುತ್ತೋಲೆ ಕಾರಣದಿಂದ ಲೆಕ್ಕ ಪರಿಶೋಧನಾ ಪ್ರಗತಿಯಲ್ಲಿ ಕುಂಠಿತವಾಗುವುದಿಲ್ಲ ಎಂದು ಪ್ರತಿಪಾದಿಸಿದೆ.

ಹೆಚ್ಚಿನ ಲಭ್ಯ ಇರುವ ಶಾಸನಬದ್ಧ ಲೆಕ್ಕ ಪರಿಶೋಧಕರನ್ನು ಬಳಸಿಕೊಂಡು ಹೆಚ್ಚಿನ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆಯನ್ನು ಗುಣಾತ್ಮಕವಾಗಿ ನಿರ್ವಹಿಸುವುದೇ ಹೊರತು ಆಯ್ಕೆಗೆ ಸಂಬಂಧಿಸಿದಂತೆ ಸಹಕಾರ ಸಂಘಗಳಿಗೆ ಮಿತಿಗೊಳಿಸಿಲ್ಲ ಎಂಬುದು ಇಲಾಖೆಯ ಅಭಿಪ್ರಾಯ.

‘ಸಹಕಾರ ಸಂಘಗಳ ಲೆಕ್ಕ ಪರಿಶೋಧನೆಗೂ ಮಾನವ ದಿನಗಳನ್ನು ನಿಗದಿಪಡಿಸಲಾಗಿದೆ. ಕೆಲಸ ನಿರ್ವಹಿಸಲು ಸಮಯದ ನಿಗದಿ ಅವೈಜ್ಞಾನಿಕವೆಂದಾದಲ್ಲಿ ಕೆಲವು ಸನ್ನದು ಲೆಕ್ಕ ಪರಿಶೋಧಕರು ಒಂದು ದಿನಕ್ಕೆ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ನಿರ್ವಹಿಸಿರುವುದು ವೈಜ್ಞಾನಿಕವೇ,’ ಎಂದು ಇಲಾಖೆಯು ಪ್ರಶ್ನಿಸಿದೆ.

ಅಲ್ಲದೆ ಒಬ್ಬ ಸನ್ನದು ಲೆಕ್ಕ ಪರಿಶೋಧಕರಿಂದ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ನಿರ್ವಹಿಸಲು 03 ದಿನಗಳನ್ನು ನಿಗದಿಪಡಿಸಿರುವುದು ಸಮಂಜಸವಾಗಿದೆ ಎಂಬ ವಾದವನ್ನು ಮುಂದೊಡ್ಡಿದೆ. ಇದೇ ವಾದವನ್ನು ಸಚಿವ ಎಸ್‌ ಟಿ ಸೋಮಶೇಖರ್‌ ಕೂಡ ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.

ಕನಿಷ್ಠ ವ್ಯವಹಾರವಿರುವ ಒಂದು ಸಹಕಾರ ಸಂಘಕ್ಕೂ ಸಹ 03 ದಿನಗಳ ಅಗತ್ಯವಿರುತ್ತದೆ. ಸನ್ನದು ಲೆಕ್ಕ ಪರಿಶೋಧಕರ ಸಹಾಯಕರು ಯಾವುದೇ ಅನುಭವವಿಲ್ಲದೇ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆಯನ್ನೂ ಅವರೇ ನಿರ್ವಹಿಸಿ ಆ ಅಧಾರದಲ್ಲಿ ಸನ್ನದು ಲೆಕ್ಕ ಪರಿಶೋಧಕರು ವರದಿ ಮತ್ತು ಹಣಕಾಸು ತ:ಖ್ತೆಗಳಿಗೆ ಸಹಿ ಮಾಡಿದಲ್ಲಿ ಅದು ದೋಷಪೂರ್ಣ ಲೆಕ್ಕ ಪರಿಶೋಧನೆಯಾಗುತ್ತದೆ. ಈ ಕಾರಣದಿಂದಾಗಿ ಬಹಳಷ್ಟು ಸಹಕಾರ ಸಂಘಗಳಲ್ಲಿ ದುರುಪಯೋಗ, ಅವ್ಯವಹಾರ ಕಾಲಕಾಲಕ್ಕೆ ಲೆಕ್ಕ ಪರಿಶೋಧನೆಯಲ್ಲಿ ಪತ್ತೆಯಾಗುತ್ತಿಲ್ಲ ಎಂದು ಇಲಾಖೆಯು ಅಭಿಪ್ರಾಯಿಸಿದೆ.

Tags: AuditorsAuditsB S YediyurappaChief Secretaryco operationD K Shivakumarh d kumarswamyS T SomshekharSiddaramaiahಎಚ್‌ ಡಿ ಕುಮಾರಸ್ವಾಮಿಡಿ ಕೆ ಶಿವಕುಮಾರ್ಬಿ ಎಸ್‌ ಯಡಿಯೂರಪ್ಪಮುಖ್ಯ ಕಾರ್ಯದರ್ಶಿಲೆಕ್ಕ ಪರಿಶೋಧನೆಗೆ ಮಿತಿಸಹಕಾರ ಸಂಘಗಳ ಲೆಕ್ಕ ಪರಿಶೋಧನೆಸಹಕಾರ ಸಚಿವರುಸಿದ್ದರಾಮಯ್ಯ
Advertisement Banner
Previous Post

ಎಪಿಎಂಸಿ ಕಾಯ್ದೆ ತಿದ್ದುಪಡಿ ಪರಿಣಾಮ; ವ್ಯಾಪಾರ ವಹಿವಾಟು ಕಡಿಮೆ, ನಷ್ಟ ಒಪ್ಪಿಕೊಂಡ ಸರ್ಕಾರ

Next Post

ಪದ್ಮ ಪ್ರಶಸ್ತಿಗೆ ಮಧುಪಂಡಿತ್‌ದಾಸ್‌, ತರಳಬಾಳುಶ್ರೀ, ಕಣವಿ, ಸಿದ್ದಲಿಂಗಯ್ಯ ಸೇರಿ ಹಲವರ ಹೆಸರು ಶಿಫಾರಸ್ಸು

thefilestack

thefilestack

Next Post

ಪದ್ಮ ಪ್ರಶಸ್ತಿಗೆ ಮಧುಪಂಡಿತ್‌ದಾಸ್‌, ತರಳಬಾಳುಶ್ರೀ, ಕಣವಿ, ಸಿದ್ದಲಿಂಗಯ್ಯ ಸೇರಿ ಹಲವರ ಹೆಸರು ಶಿಫಾರಸ್ಸು

Recommended

ಪಿಪಿಇ ಕಿಟ್‌ ಖರೀದಿ; 38.26 ಕೋಟಿ ರು ನಷ್ಟ ಪರಿಹಾರ ಪಾವತಿಗೆ ಅನುದಾನವೇ ಲಭ್ಯವಿಲ್ಲ

2 years ago

ರಾಮನಗರ, ಕಲ್ಬುರ್ಗಿಗೆ ಕಳಪೆ ಸ್ಯಾನಿಟೈಸರ್‌ ಪೂರೈಕೆ; ಔಷಧ ನಿಯಂತ್ರಣ ಪ್ರಾಧಿಕಾರ ವರದಿ

6 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd