the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್‍‌ ಅಹ್ಮದ್‌ ಹೆಸರು ಬಳಕೆ; ಗುತ್ತಿಗೆ, ಬಾಕಿ ಬಿಲ್‌ ಬಿಡುಗಡೆಗೆ 1 ಕೋಟಿ ವಸೂಲು

thefilestack by thefilestack
August 2, 2023
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು; ಕಾಮಗಾರಿ ಗುತ್ತಿಗೆ ಹಾಗೂ ಬಾಕಿ ಇರುವ ಬಿಲ್‌ಗಳ ಮೊತ್ತವನ್ನು ಬಿಡುಗಡೆ ಮಾಡುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್‌ ಸದಸ್ಯ ನಸೀರ್‍‌ ಅಹ್ಮದ್‌ ಅವರ ಹೆಸರಿನಲ್ಲಿ ಕೋಲಾರ ಮೂಲದ ಇಬ್ಬರು ವ್ಯಕ್ತಿಗಳು ಒಂದು ಕೋಟಿ ರು.ಗಳನ್ನು ಮುಂಗಡವಾಗಿ ಪಡೆದು ವಂಚಿಸಿರುವ ಪ್ರಕರಣವು ಇದೀಗ ಬಹಿರಂಗವಾಗಿದೆ.

 

ಅಧಿಕಾರಿ, ನೌಕರರ ವರ್ಗಾವಣೆಯಲ್ಲಿ ವ್ಯಾಪಾರ ನಡೆಯುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ ನಡೆಸಿದ್ದ ವಾಗ್ದಾಳಿಯಿಂದ ಕಾಂಗ್ರೆಸ್‌ ಸರ್ಕಾರವು ಇನ್ನೂ ಚೇತರಿಸಿಕೊಂಡಿಲ್ಲ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಸೀರ್‍‌  ಅಹ್ಮದ್‌ ಹೆಸರನ್ನು ಮುಂದಿರಿಸಿ ಕಾಮಗಾರಿ ಗುತ್ತಿಗೆ ಮತ್ತು ಹಳೆ ಬಿಲ್‌ಗಳ ಮೊತ್ತವನ್ನು ಬಿಡುಗಡೆ ಮಾಡಿಸಲು  1 ಕೋಟಿ  ಹಣ ವಸೂಲಿ ಮಾಡಿರುವ ಪ್ರಕರಣವು ಸರ್ಕಾರವನ್ನು ತೀವ್ರ ಮುಜುಗರದಲ್ಲಿ ಸಿಲುಕಿಸಿದಂತಾಗಿದೆ. ಅಲ್ಲದೇ ಪ್ರತಿಪಕ್ಷ ಬಿಜೆಪಿ, ಜೆಡಿಎಸ್‌ಗೆ ಮತ್ತೊಂದು ಪ್ರಬಲ ಅಸ್ತ್ರವನ್ನು ಕೊಟ್ಟಂತಾಗಿದೆ.

 

ಈ ಪ್ರಕರಣದಲ್ಲಿ ವಂಚನೆಗೀಡಾಗಿರುವ ಬೆಂಗಳೂರಿನ  ಪ್ರತಾಪ್‌ ಬಿ ಎನ್‌ ಎಂಬುವರು ಸಲ್ಲಿಸಿದ್ದ ದೂರಿನ ಆಧಾರದ ಮೇರೆಗೆ ಈಗಾಗಲೇ ಕೋಲಾರ ಜಿಲ್ಲೆಯ ಗುಳೇಪೇಟೆ ಸರ್ಕಲ್‌ ಪೊಲೀಸ್‌ ಠಾಣೆಯಲ್ಲಿ ಮುಬಾರಕ್‌ ಮತ್ತು ಪೀರ್‍‌ ಸೈಯದ್‌ ಖಾದರ್‍‌ ಆಲಿ ಷಾ ಖಾದ್ರಿ ಎಂಬುವರ ವಿರುದ್ಧ ಎಫ್‌ಐಆರ್‍‌ ಕೂಡ ದಾಖಲಾಗಿದೆ. ಈ ಎಫ್‌ಐಆರ್‍‌ನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಆರೋಪಿ ಪೀರ್‍‌ ಸೈಯದ್‌ ಖಾದರ್‍‌ ಆಲ ಷಾ ಖಾದ್ರಿ ಎಂಬುವರ ಮೂಲಕ ದೂರುದಾರ ಪ್ರತಾಪ್‌ಗೆ ಪರಿಚಿತವಾಗಿದ್ದ ಮುಬಾರಕ್‌ ಎಂಬಾತ ಎಂ ಎಲ್‌ ಸಿ ನಸೀರ್‍‌ ಅಹ್ಮದ್‌ ಅವರ ಹೆಸರನ್ನು ಮುಂದಿರಿಸಿ ಹಣ ಪಡೆದಿರುವುದು ಎಫ್‌ಐಆರ್‍‌ನಿಂದ ತಿಳಿದು ಬಂದಿದೆ.

 

ಕೋಲಾರ ನಗರಸಭೆಯು ಸದ್ಯದಲ್ಲೇ   500 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದೆ. ಈ ಯೋಜನೆಯಲ್ಲಿಯೂ ತುಂಡು ಗುತ್ತಿಗೆ ಮೂಲಕ ಕಾಮಗಾರಿ ಟೆಂಡರ್‍‌ ಕೊಡಿಸಲಾಗುವುದು ಎಂದು ಆರೋಪಿ ಮುಬಾರಕ್‌ ನಂಬಿಸಿದ್ದ. ಈ ಕೆಲಸಕ್ಕೆ ಒಂದೂವರೆ ಕೋಟಿ ಹಣ ಕೊಡಬೇಕು ಎಂದು ಬೇಡಿಕೆ ಇರಿಸಿದ್ದ ಆರೋಪಿ ಮುಬಾರಕ್‌,  ಮೂರು ಕಂತಿನಲ್ಲಿ ಒಂದು ಕೋಟಿ ರು.ಗಳನ್ನು ವಸೂಲು ಮಾಡಿದ್ದ ಎಂಬ ಸಂಗತಿಯು ಎಫ್‌ಐಆರ್‍‌ನಿಂದ ಗೊತ್ತಾಗಿದೆ.

 

‘ನಜೀರ್‍‌ ಅಹ್ಮದ್‌ ಸಾಬ್‌ ಅವರು ರಾಜಕೀಯವಾಗಿ ಪ್ರಭಾವಿಯಾಗಿದ್ದು ನಾನು ಅವರ ಬಲಗೈ ಬಂಟ. ಅವರು ನನ್ನ ಮಾತನ್ನು ಕೇಳುತ್ತಾರೆಂದು ದೂರುದಾರ ಪ್ರತಾಪ್‌ನನ್ನು ಮುಬಾರಕ್‌ ನಂಬಿಸಿದ್ದ. ಅವರ ಮಾತನ್ನು ನಂಬಿ ಮುಬಾರಕ್‌ ಗೆ  25 ಲಕ್ಷ ರುಪಾಯಿ ಹಣವನ್ನು ನೀಡಿದ್ದ. ಆ ನಂತರ 2023 ಜುಲೈ 2ರಂದು 25 ಲಕ್ಷ ರು., 2023ರ ಜುಲೈ 22ರಂದು ಕೋಲಾರ ಹೊರ ವಲಯದ ನಾಗಾರ್ಜುನ ಹೋಟೆಲ್‌ ನಲ್ಲಿ 50 ಲಕ್ಷ ರು. ನಗದು ಹಣವನ್ನು ಮುಬಾರಕ್‌ಗೆ ನೀಡಿದ್ದ,’ ಎಂದು ಎಫ್‌ಐಆರ್‍‌ನಲ್ಲಿ ವಿವರಿಸಲಾಗಿದೆ.

 

ಎರಡನೇ ಆರೋಪಿ ಪೀರ್‍‌ ಸೈಯದ್‌ ಖಾದರ್‍‌ ಆಲಿ ಷಾ ಖಾದ್ರಿ ಅವರು ಸಹ ಕಮಿಷನ್‌ ಹಾಗೂ ಓಡಾಟದ ಖರ್ಚು ವೆಚ್ಚ ಎಂದು 9 ಲಕ್ಷ ರುಪಾಯಿ ಹಣವನ್ನು ನಗದು ರೂಪದಲ್ಲಿ ಪಡೆದಿದ್ದ.  ಆ ನಂತರ ಕಾಮಗಾರಿ ಮಂಜೂರಾತಿ ಮತ್ತು ಹಳೆ ಬಿಲ್‌ಗಳ ಹಣ ವರ್ಗಾವಣೆ ವಿಚಾರದಲ್ಲಿ ತಡವಾಗಿತ್ತು. ಹೀಗಾಗಿ ಪ್ರತಾಪ್‌ ಹಲವು ಬಾರಿ ಮುಬಾರಕ್‌ ಗೆ ಕರೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮುಬಾರಕ್‌, ಕಾಮಗಾರಿ ಹಾಗೂ ಹಣ ವರ್ಗಾವಣೆ ಬಗ್ಗೆ ನಜೀರ್‍‌ ಅಹ್ಮದ್‌ ಅವರೊಂದಿಗೆ ಹಲವಾರು ಬಾರಿ ಫೋನಿನಲ್ಲಿ ಸಂಭಾಷಣೆ ನಡೆಸಿರುವುದಾಗಿ ಮೆಸೇಜ್‌ಗಳನ್ನು ವಾಟ್ಸ್‌ ಆಪ್‌ ಮೂಲಕ ದೂರುದಾರ ಪ್ರತಾಪ್‌ ಮೊಬೈಲ್‌ಗೆ ಕಳಿಸಿದ್ದ ಎಂದು ಎಫ್‌ಐಆರ್‍‌ನಲ್ಲಿ ಉಲ್ಲೇಖಿಸಲಾಗಿದೆ.

 

‘ಎಂಎಲ್‌ಸಿ ನಜೀರ್‍‌ ಅಹ್ಮದ್‌ ಹೆಸರಿನಲ್ಲಿ ಮೆಸೇಜ್‌ಗಳು ಬಂದಿದ್ದು ದೂರುದಾರ ಅದನ್ನು ನಂಬಿದ್ದ. ತದ ನಂತರ ಅವರ ನಡವಳಿಕೆ ಬಗ್ಗೆ ಅನುಮಾನಗೊಂದು ವಿಚಾರಿಸಿದಾಗ ಮುಬಾರಕ್‌ ಬೇರೊಂದು ಮೊಬೈಲ್‌ನಲ್ಲಿ ಎಂಎಲ್‌ಸಿ ನಜೀರ್‍‌ ಅಹ್ಮದ್‌ ಎಂದು ಸೇವ್ ಮಾಡಿಕೊಂಡು ದೂರುದಾರನಿಗೆ ಮೊಬೈಲ್‌ನಲ್ಲಿ ಮುಬಾರಕ್‌ ಮತ್ತು ನಜೀರ್‍‌ ಅಹ್ಮದ್‌ ಅವರು ಚಾಟಿಂಗ್‌ ಮಾಡಿರುವಂತೆ ಮೆಸೇಜ್‌ ಚಾಟ್‌ ಮಾಡಿಕೊಂಡು ಆ ಚಾಟಿಂಗ್‌ ಮೆಸೇಜ್‌ಗಳನ್ನು ದೂರುದಾರ ನಂಬುವಂತೆ ಅವರಿಗೆ ಕಳಿಸಿದ್ದ, ‘ ಎಂದು ಎಫ್‌ಐಆರ್‍‌ನಲ್ಲಿ ವಿವರಿಸಲಾಗಿದೆ.

 

ಅಲ್ಲದೇ ಇದೇ ಆರೋಪಿಯು ಕೋಲಾರ ಶಾಸಕ ನಂಜೇಗೌಡ ಅವರ ಹೆಸರನ್ನೂ ಬಳಸಿದ್ದ. ಕೋಲಾರದ ಡೈರಿಯಲ್ಲಿ ಗುತ್ತಿಗೆ ಕೊಡಿಸಿ ಕಾಮಗಾರಿಗೆ 25 ಲಕ್ಷ ರು. ಹಣ ನೀಡಬೇಕು ಎಂದು ಬೇಡಿಕೆ ಇರಿಸಿದ್ದ. ಈ ಬಗ್ಗೆ ದೂರುದಾರನಿಗೆ ಅನುಮಾನ ಬಂದು ಮಾಲೂರು ಶಾಸಕ ನಂಜೇಗೌಡರ ಗಮನಕ್ಕೆ ತರಲಾಗಿತ್ತು. ಆದರೆ ಆರೋಪಿ ಮುಬಾರಕ್‌ ಎಂಬಾತ ಕೋಲಾರ ಶಾಸಕ ನಂಜೇಗೌಡರ ಗಮನಕ್ಕೆ ಯಾವುದೇ ಕಾಮಗಾರಿ ಹಾಗೂ ಗುತ್ತಿಗೆ ಬಗ್ಗೆ ಚರ್ಚಿಸಿರಲಿಲ್ಲ. ಹೀಗಾಗಿ ನಂಜೇಗೌಡರ ಹೆಸರನ್ನೂ ದುರ್ಬಳಕೆ ಮಾಡಿಕೊಂಡು ದೂರುದಾರ ಪ್ರತಾಪ್‌ ಎಂಬಾತನಿಗೆ ವಂಚನೆ ಮಾಡಿದ್ದ ಎಂಬ ಅಂಶವು ಎಫ್‌ಐಆರ್‍‌ನಿಂದ ತಿಳಿದು ಬಂದಿದೆ.

 

ಕಾಮಗಾರಿ ಗುತ್ತಿಗೆ ಹಾಗೂ ಹಳೆ ಬಿಲ್‌ಗಳ ವರ್ಗಾವಣೆ ವಿಚಾರದಲ್ಲಿ ಯಾವ ಕೆಲಸವೂ ಆಗದ ಕಾರಣ ಹಣ ವಾಪಸ್‌ ಕೊಡಬೇಕು ಎಂದು ಪ್ರತಾಪ್‌, ಮುಬಾರಕ್‌ ಎಂಬಾತನ ಮೇಲೆ ಒತ್ತಡ ಹೇರಿದ್ದ. ಅದಕ್ಕೆ ಪ್ರತಿಕ್ರಿಯಿಸಿದ್ದ ಆರೋಪಿ ಮುಬಾರಕ್‌ ‘ನಿನ್ನ ಕೈಯಲ್ಲಿ ಏನು ಆಗುತ್ತದೋ ಅದನ್ನು ಮಾಡಿಕೋ ನಾನು ಯಾವುದಕ್ಕೂ ಹೆದರುವುದಿಲ್ಲ. ನೀನು ಏನು ಕಿತ್ತಕೊಳ್ಳುತ್ತಿಯೋ ಕಿತ್ತಿಕೋ ಎಂದು ಕೆಟ್ಟ ಶಬ್ದಗಳಿಂದ ನಿಂದಿಸಿ ತನ್ನ ತಂಟೆಗೆ ಬಂದರೆ ಇನಗೆ ಒಂದು ಗತಿ ಕಾಣಿಸುತ್ತೇನೆಂದು ಬೆದರಿಕೆ ಹಾಕಿದ್ದ,’ ಎಂದು ಎಫ್‌ಐಆರ್‍‌ನಲ್ಲಿ ವಿವರಿಸಲಾಗಿದೆ.

Tags: 1 ಕೋಟಿ ವಸೂಲು500 ಕೋಟಿBasavanagouda Patil YatnalbjpBribechief ministercivil workscongressExtrotionFIRGulpet CircleKolarMisuseMLCNasir Ahmedಎಂಎಲ್‌ಸಿಎಫ್‌ಐಆರ್‌ಕೋಲಾರಕೋಲಾರ ಡೈರಿಖಾದ್ರಿಡಿ ಕೆ ಶಿವಕುಮಾರ್ನಜೀರ್‍‌ ಅಹ್ಮದ್‌ನಂಜೇಗೌಡನಸೀರ್‌ ಅಹ್ಮದ್‌ಪೀರ್‍‌ಬಸನಗೌಡ ಪಾಟೀಲ್‌ ಯತ್ನಾಳ್‌ಮುಖ್ಯಮಂತ್ರಿಮುಬಾರಕ್‌ಮೊಬೈಲ್‌ರಾಜಕೀಯ ಕಾರ್ಯದರ್ಶಿಲಂಚವಿಧಾನ ಪರಿಷತ್‌ಶಾಸಕಸೈಯದ್‌ಹಣಕ್ಕೆ ಬೇಡಿಕೆಹೆಚ್‌ ಡಿ ಕುಮಾರಸ್ವಾಮಿ
Advertisement Banner
Previous Post

ದಿ ಕಾಶ್ಮೀರ್‍‌ ಫೈಲ್ಸ್‌, 777 ಚಾರ್ಲಿ ಸೇರಿ 4 ಸಿನಿಮಾಗಳ ಪ್ರದರ್ಶಕರಿಗೆ ಜಿಎಸ್‌ಟಿ ಹಿಂಪಾವತಿ; ಹೊರಬಿದ್ದ ಆದೇಶ

Next Post

ಡಿವೈಎಸ್ಪಿ ವರ್ಗಾವಣೆಯಲ್ಲಿ ಸಿಎಂ ಮೇಲುಗೈ; ಉಸ್ತುವಾರಿ ಸಚಿವರಿಗೆ ಮನ್ನಣೆ, ಕೆರಳಿದ ಶಾಸಕ

thefilestack

thefilestack

Next Post

ಡಿವೈಎಸ್ಪಿ ವರ್ಗಾವಣೆಯಲ್ಲಿ ಸಿಎಂ ಮೇಲುಗೈ; ಉಸ್ತುವಾರಿ ಸಚಿವರಿಗೆ ಮನ್ನಣೆ, ಕೆರಳಿದ ಶಾಸಕ

Recommended

ಬೆಡ್‌ ರೂಂ ರಹಸ್ಯ; ವಾರ್ಡ್‌ರೂಬ್‌ನಲ್ಲಿದ್ದವು 90 ಕೋಟಿ ರು. ನಮೂದಿಸಿದ್ದ ಚೆಕ್‌ ಹಾಳೆಗಳು

5 years ago

ಪೌರ ಕಾರ್ಮಿಕರಿಗೆ ಬಿಸಿಯೂಟ; ಇಂದಿರಾ ಕ್ಯಾಂಟೀನ್‌ ಬದಲು ಇಸ್ಕಾನ್‌-ಟಚ್‌ಸ್ಟೋನ್‌ ಫೌಂಡೇಷನ್‌ಗೆ ಗುತ್ತಿಗೆ

4 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd