the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home IT/ED

ಹಣ ಬಚ್ಚಿಡಲು ಫ್ಲಾಟ್‌ಗಳ ಬಳಕೆ; 4 ಕೋಟಿ ರು. ಬೇನಾಮಿ ಹೂಡಿಕೆ, ಬಾಯ್ಬಿಟ್ಟ 5ನೇ ಆರೋಪಿ

thefilestack by thefilestack
March 9, 2024
in IT/ED
0
0
SHARES
1
VIEWS
Share on FacebookShare on Twitter

ಬೆಂಗಳೂರು; ನವದೆಹಲಿಯ ಸಫ್ದರ್‍‌ ಜಂಗ್‌ ರಸ್ತೆಯಲ್ಲಿರುವ ಫ್ಲಾಟ್‌ಗಳನ್ನು ಹಣವನ್ನು ಬಚ್ಚಿಡಲು ಮೊದಲ ಆರೋಪಿ ಡಿ ಕೆ ಶಿವಕುಮಾರ್‍‌ ಅವರು ಬಳಸುತ್ತಿದ್ದರು ಎಂಬ ಸಂಗತಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನ್ಯಾಯಾಲಯಕ್ಕೆ ವಿವರಣೆ ಒದಗಿಸಿದ್ದರು.

 

ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಡಿ ಕೆ ಶಿವಕುಮಾರ್‍‌ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್‍‌ ದಾಖಲಿಸಿರುವ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆಯ ಉಪ ನಿರ್ದೇಶಕರು ನ್ಯಾಯಾಲಯಕ್ಕೆ ಸಲ್ಲಿಸಿರುವ ಸಂಪೂರ್ಣ ವಿವರಗಳು ಮುನ್ನೆಲೆಗೆ ಬಂದಿವೆ.

 

ಈ ಸಂಬಂಧ ‘ದಿ ಫೈಲ್‌’ ಸಮಗ್ರ ಕಡತವನ್ನು ಆರ್‍‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

‘ನವದೆಹಲಿಯ ಮತ್ತೊಂದು ಮನೆ ನಂ.201 ಸಪ್ದರ್‍‌ಜಂಗ್‌ನಲ್ಲಿ 6,68,84,100 ರು.ಗಳನ್ನು ವಶಕ್ಕೆ ಪಡೆದಿತ್ತು. ನಾಲ್ಕನೇ ಆರೋಪಿ ನೀಡಿದ ಹೇಳಿಕೆ ಅನುಸಾರ ಈ ಬಂಗಲೆಯು ಸುರೇಶ್‌ ಕುಮಾರ್‍‌ ಶರ್ಮ ಅವರಿಗೆ ಸೇರಿದೆ. ಅವರು ಸಾರಿಗೆ ಬಿಸಿನೆಸ್‌ ನಡೆಸುತ್ತಿದ್ದಾರೆ. ಮತ್ತು ಮೂರನೇ ಆರೋಪಿ ಸಹೋದರರಾಗಿದ್ದಾರೆ. ಈ ಮನೆಯನ್ನು ಮೂರನೇ ಆರೋಪಿ ಬಳಕೆ ಮಾಡುತ್ತಿದ್ದರು. ಮತ್ತು ಮೊದಲನೇ ಆರೋಪಿಯು ಹಲವು ವರ್ಷಗಳಿಂದ ಹಣವನ್ನು ಬಚ್ಚಿಡಲು ಈ ಬಂಗಲೆಯನ್ನು ಬಳಸುತ್ತಿದ್ದರು,’ ಎಂದು ವಿವರಿಸಿರುವುದು ಗೊತ್ತಾಗಿದೆ.

 

ಐದನೇ ಆರೋಪಿಯು ಹಲವು ವಿಷಯಗಳನ್ನು ಬಾಯಿ ಬಿಟ್ಟಿದ್ದಾರೆ. ಅದರಲ್ಲಿ ಹಲವು ಕೋಟಿ ರೂ.ಗಳ ಅವ್ಯವಹಾರ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದರಲ್ಲಿ ಬಹುತೇಕ ಹಣವು ಲೆಕ್ಕಕ್ಕಿಲ್ಲ. ಹಾಗೆಯೇ ನಗದು ರೂಪದಲ್ಲಿ ಚಲಾವಣೆಯಾಗಿದೆ ಎಂದು ಐದನೇ ಆರೋಪಿಯು ವಿವರಿಸಿದ್ದಾರೆ.

 

‘ಇದು ಸ್ಪಷ್ಟವಾಗಿ ಮೊದಲ ಆರೋಪಿಯ ನಗದನ್ನು ವಿವಿಧ ರೂಪದಲ್ಲಿ ತಿರುಗಿಸುವ ತಂತ್ರವಾಗಿದೆ. ಮುಂದುವರೆದು ಮೊದಲನೇ ಆರೋಪಿ ಡಿ ಕೆ ಶಿವಕುಮಾರ್‍‌ ಆದಾಯ ತೆರಿಗೆ ಇಲಾಖೆಯಿಂದ ತಪ್ಪಿಸಿಕೊಳ್ಳಲು ಎರಡನೇ ಆರೋಪಿಯನ್ನು ಮುಂದು ಮಾಡಿದ್ದಾರೆ,’ ಎಂದು ಹೇಳಿರುವುದು ಗೊತ್ತಾಗಿದೆ.

 

ಮೊದಲನೇ ಆರೋಪಿ ಡಿ ಕೆ ಶಿವಕುಮಾರ್‍‌ ಅವರ ಸೂಚನೆಯಂತೆ ನಾಲ್ಕನೇ ಆರೋಪಿಯು ಆಗಿದ್ದಾಂಗ್ಗೆ ಹಣವನ್ನು ಇಟ್ಟಿರುತ್ತಾರೆ. ಈ ಹಣವು ಮೊದಲ ಆರೋಪಿ ಡಿ ಕೆ ಶಿವಕುಮಾರ್‍‌ ಅವರಿಗೆ ಸೇರಿದೆ ಇದನ್ನು ದಾಖಲೆ ರಹಿತ ಖಾತೆಗಳಲ್ಲಿ, ರಿಯಲ್‌ ಎಸ್ಟೇಟ್‌ ಬಿಸಿನೆಸ್‌ನಲ್ಲಿ ಹೂಡಿಕೆ ಮಾಡಲಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮುಂದೆ ನಾಲ್ಕನೇ ಆರೋಪಿಯು ಬಾಯಿಬಿಟ್ಟಿರುವುದು ತಿಳಿದು ಬಂದಿದೆ.

 

ನಾಲ್ಕನೇ ಆರೋಪಿ ಮನೆಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದ ಸಂದರ್ಭದಲ್ಲಿ ಸಿಕ್ಕಿದ್ದ 41,03,600 ಲಕ್ಷ ರು.ಗಳನ್ನು ಜಫ್ತಿ ಮಾಡಲಾಗಿತ್ತು. ರಿಯಲ್‌ ಎಸ್ಟೇಟ್‌ನಲ್ಲಿ ಬೇನಾಮಿ ಹೂಡಿಕೆಗೆ ಸಂಬಂಧಿಸಿದಂತೆ ಮೊದಲನೇ ಆರೋಪಿ ಡಿ ಕೆ ಶಿವಕುಮಾರ್‍‌, ಅಜಯ್‌ ಖನ್ನಾ ಅವರೊಂದಿಗೆ ವ್ಯವಹಾರ ನಡೆಸಿದ್ದರು. ಈ ಸಂಬಂಧ ಅಜಯ್‌ ಖನ್ನಾ ಅವರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಆ ವೇಳೆಯಲ್ಲಿ ಮೊದಲನೇ ಆರೋಪಿ ಡಿ ಕೆ ಶಿವಕುಮಾರ್‍‌ 4 ಕೋಟಿ ರು.ಗಳನ್ನು ಬೇನಾಮಿಯಾಗಿ ಹೂಡಿಕೆ ಮಾಡಿದ್ದರು ಎಂದು ಬಹಿರಂಗಪಡಿಸಿದ್ದರು ಎಂಬುದು ಗೊತ್ತಾಗಿದೆ.

 

ಆದರೆ ಅಜಯ್‌ ಖನ್ನ ಜೊತೆಗೆ ಯಾವುದೇ ವ್ಯವಹಾರ ಇಲ್ಲ ಎಂದು ಮೊದಲನೇ ಆರೋಪಿ ಡಿ ಕೆ ಶಿವಕುಮಾರ್‍‌ ಹೇಳಿದ್ದರು. ದಿವಂಗತ ಸುರೇಶ್‌ ಶರ್ಮ ಅವರ ಮೂಲಕ 1 ಕೋಟಿ ಮುಂಗಡವಾಗಿ ಪಡೆದಿದ್ದೇನೆ ಎಂದು ಅಜಯ್‌ ಖನ್ನ ಹೇಳಿದ್ದರು. ನಂತರ ಈ ಹಣವನ್ನು ಹಿಂತಿರುಗಿಸಿರುವುದಾಗಿ ಅಜಯ್‌ ಖನ್ನಾ ಹೇಳಿದ್ದರು ಎಂದು ವಿವರಿಸಲಾಗಿದೆ.

Tags: Basanagouda Patil YatnalbjpcongressD K ShivakumarD K SureshDelhiEnclaveFlatsh d kumarswamyIncomeIT ActNew DelhiRahul GandhiRaidSafdarjungSiddaramaiahaTAXಆದಾಯಡಿ ಕೆ ಶಿವಕುಮಾರ್ತಿಹಾರ್‌ ಜೈಲುತೆರಿಗೆದಾಳಿದೆಹಲಿನವದೆಹಲಿಫ್ಲಾಟ್‌ಬಸನಗೌಡ ಪಾಟೀಲ್‌ ಯತ್ನಾಳ್‌ಬಿಜೆಪಿವಂಚನೆಸಫ್ತರ್‌ಜಂಗ್‌ಸಿದ್ದರಾಮಯ್ಯಸಿಬಿಐಸೆರೆಮನೆಹಣಹೆಚ್‌ ಡಿ ಕುಮಾರಸ್ವಾಮಿ
Advertisement Banner
Previous Post

ಹಣ ವರ್ಗಾವಣೆ, ಸಾಗಣೆ; ಡಿಕೆಶಿ ಸೂಚನೆಯಂತೆಯೇ ಬೇನಾಮಿ ವ್ಯವಹಾರಗಳ ನಿರ್ವಹಣೆ

Next Post

ಕೃಷಿಯಿಂದ ಗಳಿಸಿದ ಹಣವನ್ನು ದೆಹಲಿಗೆ ಸಾಗಿಸಿದ್ಹೇಗೆ?: ಐ ಟಿ ಮುಂದೆ ಬಾಯಿಬಿಡದ ಡಿಕೆಶಿ

thefilestack

thefilestack

Next Post

ಕೃಷಿಯಿಂದ ಗಳಿಸಿದ ಹಣವನ್ನು ದೆಹಲಿಗೆ ಸಾಗಿಸಿದ್ಹೇಗೆ?: ಐ ಟಿ ಮುಂದೆ ಬಾಯಿಬಿಡದ ಡಿಕೆಶಿ

Recommended

ಪರಿಸರ ನಿಯಮ ಉಲ್ಲಂಘನೆ; ದಂಡ ವಸೂಲು ಮಾಡದ ಮಾಲಿನ್ಯ ನಿಯಂತ್ರಣ ಮಂಡಳಿ

6 years ago

ಅಂಬೇಡ್ಕರ್‍‌ ಸಹಾಯ ಹಸ್ತ ಯೋಜನೆಯ ಕಾರ್ಮಿಕ ಬಂಧು ಸೇವೆ ರದ್ದುಗೊಳಿಸಿದ ಕಾಂಗ್ರೆಸ್‌ ಸರ್ಕಾರ

2 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd