the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home IT/ED

ಹಣ ವರ್ಗಾವಣೆ, ಸಾಗಣೆ; ಡಿಕೆಶಿ ಸೂಚನೆಯಂತೆಯೇ ಬೇನಾಮಿ ವ್ಯವಹಾರಗಳ ನಿರ್ವಹಣೆ

thefilestack by thefilestack
March 8, 2024
in IT/ED
0
0
SHARES
1
VIEWS
Share on FacebookShare on Twitter

ಬೆಂಗಳೂರು; ಮೊದಲನೇ ಆರೋಪಿ ಡಿ ಕೆ ಶಿವಕುಮಾರ್‍‌ ಅವರ ಎಲ್ಲಾ ಬೇನಾಮಿ ವ್ಯವಹಾರಗಳನ್ನು ನಾಲ್ಕನೇ ಆರೋಪಿಯು ನಿರ್ವಹಿಸುತ್ತಿದ್ದರು ಮತ್ತು ಸಹಕರಿಸುತ್ತಿದ್ದರು. ಎಲ್ಲವೂ ಮೊದಲನೇ ಆರೋಪಿ ಡಿ ಕೆ ಶಿವಕುಮಾರ್ ಸೂಚನೆಯಂತೆಯೇ ನಡೆಯುತ್ತಿತ್ತು ಎಂಬುದನ್ನು ಆದಾಯ ತೆರಿಗೆ ಇಲಾಖೆಯು ವಿಚಾರಣೆ ವೇಳೆ ಪತ್ತೆ ಹಚ್ಚಿದೆ.

 

ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಡಿ ಕೆ ಶಿವಕುಮಾರ್‍‌ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್‍‌ ದಾಖಲಿಸಿರುವ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆಯ ಉಪ ನಿರ್ದೇಶಕರು ನ್ಯಾಯಾಲಯಕ್ಕೆ ಸಲ್ಲಿಸಿರುವ ಸಂಪೂರ್ಣ ವಿವರಗಳು ಮುನ್ನೆಲೆಗೆ ಬಂದಿವೆ.

 

ಈ ಸಂಬಂಧ ‘ದಿ ಫೈಲ್‌’ ಸಮಗ್ರ ಕಡತವನ್ನು ಆರ್‍‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

‘ಹಣ ವರ್ಗಾವಣೆ ಮತ್ತು ಸಾಗಣೆಗೆ ಸಂಬಂಧಿಸಿದಂತೆ ವಿವರಿಸಿದ ನಾಲ್ಕನೇ ಅರೋಪಿ,  ಶೈಲೇಂದ್ರ ಎನ್ನುವವರು ನನ್ನನ್ನು ಭೇಟಿ ಮಾಡಿ ಮೂರು ಕಂತುಗಳಲ್ಲಿ ಹಣ ನೀಡಿದರು ಎಂದು ತಿಳಿಸಿದ್ದಾರೆ. ಇದು ಆರೋಪಿ-1ರ ಸೂಚನೆಗೆ ಅನುಸಾರ ನಡೆಯಿತು. ಇದೇ ಸಂದರ್ಭದಲ್ಲಿ ಜಗದೀಶ್‌ ಚಂದ್‌ ಎನ್ನುವವರು ಹೇಳಿಕೆ ನೀಡಿದ್ದು ಈ ನಗದನ್ನು ಆರೋಪಿ-4 ಮತ್ತು ಅರೋಪಿ-5 ವ್ಯವಹರಿಸುತ್ತಿದ್ದರು ಎಂದು ಹೇಳಿದ್ದಾರೆ,’ ಎಂದು ವಿವರಿಸಲಾಗಿದೆ.

 

ನಾಲ್ಕನೇ ಆರೋಪಿಯು ಸರ್ಕಾರಿ ನೌಕರ. ಅಷ್ಟೊಂದು ಹಣವನ್ನು ತನ್ನದೇ ಮೂಲಗಳಿಂದ ಗಳಿಸಲು ಸಾಧ್ಯವಿಲ್ಲ. ಈ ಬಂಗಲೆಗಳಲ್ಲಿ ವಶಕ್ಕೆ ಪಡೆದ ಹಣ ಖಚಿತವಾಗಿ ಮೊದಲನೇ ಆರೋಪಿಗೆ ಸೇರಿದ್ದಾಗಿದೆ. ನಾಲ್ಕನೇ ಆರೋಪಿಯು ಮೊದಲೇ ಆರೋಪಿಯ ಎಲ್ಲಾ ಬೇನಾಮಿ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದರು. ಇನ್ನೂ ಹಲವು ಬೇನಾಮಿ ವ್ಯವಹಾರಕ್ಕೆ ಸಹಕರಿಸುತ್ತಿದ್ದರು. ಐದನೇ ಆರೋಪಿಯು ಈ ಎಲ್ಲಾ ವಹಿವಾಟಿನ ವಿವರಗಳನ್ನು ದಾಖಲಿಸುತ್ತಿದ್ದ ಎಂದು ವಿವರಿಸಿರುವುದು ಗೊತ್ತಾಗಿದೆ.

 

‘ಈ ಮೇಲಿನ ಸಾಕ್ಷಿಗಳು ಮತ್ತು ಚರ್ಚೆಗಳನ್ನು ಗಮನಿಸಿದಾಗ ಸ್ಪಷ್ಟವಾಗುವುದೇನೆಂದರೆ ಭೌತಿಕವಾಗಿ ಲಭ್ಯವಾದ ಹಣ ಆರೋಪಿ-1ಕ್ಕೆ ಸೇರಿದೆ ಎಂಬುದು. ಇದೇ ಸಂದರ್ಭದಲ್ಲಿ ಆರೋಪಿ-3ರ ಬಂಗಲೆಯಲ್ಲಿ ತಪಾಸಣೆ ಮುಂದುವರೆದಿತ್ತು. ನವ ದೆಹಲಿಯಲ್ಲಿ ನಾನು ಯಾವುದೇ ಕಚೇರಿ ಅಥವಾ ಬಿಸಿನೆಸ್‌ ಹೊಂದಿಲ್ಲ ಎಂದು ಮೂರನೇ ಆರೋಪಿಯು ಹೇಳಿದ್ದಾರೆ. ಈ ಅಪಾರ್ಟ್‌ಮೆಂಟನ್ನು ಆರೋಪಿ-1 ಉಪಯೋಗಿಸುತ್ತಿದ್ದಾರೆ ಎಂದು ಹೇಳಿದ್ದಾರೆ,’ ಎಂದು ವಿವರಿಸಿದ್ದಾರೆ.

 

ವಿಶೇಷವೆಂದರೇ ಬಂಗಲೆಗಳಲ್ಲಿ ಸಿಕ್ಕಿದ್ದ ನಗದು ತಮಗೆ ಸೇರಿದ್ದಲ್ಲ ಎಂದು ಮೂರನೇ ಆರೋಪಿ ಹೇಳಿಕೆ ನೀಡಿದ್ದರು. ಮೂರನೇ ಆರೋಪಿಯ ಹೇಳಿಕೆಗಳನ್ನು ಗಮನಿಸಿದರೇ ಮೊದಲನೇ ಆರೋಪಿಯ ಅನಧಿಕೃತ ನಗದು ವರ್ಗಾವಣೆಗಳನ್ನು ನೋಡಬಹುದು. ಅಲ್ಲದೇ ಮೊದಲನೇ ಆರೋಪಿಯ ಹೇಳಿಕೆಗಳನ್ನು ಗಮನಿಸಿದರೆ ಬಂಗಲೆಯ ಕೊಠಡಿಯೊಂದನ್ನು ಮೊದಲನೇ ಆರೋಪಿಯು ಬಳಕೆ ಮಾಡುತ್ತಿದ್ದರು ಮತ್ತು ಅದರಲ್ಲಿ ನಗದನ್ನು ಬಚ್ಚಿಟ್ಟಿದ್ದರು ಎಂಬುದು ಗೊತ್ತಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆಯು ತನ್ನ ವಿವರಣೆಯಲ್ಲಿ ದಾಖಲಿಸಿದೆ

 

‘ಈ ವಿವರಗಳನ್ನು ವಿಶ್ಲೇಷನಾತ್ಮಕವಾಗಿ ಗಮನಿಸಿದಾಗ ಮೂರನೇ ಆರೋಪಿ-3 ವ್ಯವಸ್ಥಿತವಾಗಿ ಬೆಂಬಲ ನೀಡಿರುವುದು ಕಂಡುಬರಲಿದೆ. ತೆರಿಗೆ ವಂಚನೆ ಮಾಡುವ ಉದ್ದೇಶದಿಂದ ಹೀಗೆ ಮಾಡಲಾಗಿದೆ. ಜೊತೆಗೆ ಆರೋಪಿ-1 ದಂಡದಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಲಾಗಿದೆ. ಆರೋಪಿ-1ರನ್ನು ರಕ್ಷಿಸುವುದಕ್ಕಾಗಿಯೂ ಹೀಗೆ ಮಾಡಲಾಗಿದೆ ಎಂಬುದು ಮೇಲಿನ ವಿವರಗಳನ್ನು ಗಮನಿಸಿದಾಗ ಅರಿವಿಗೆ ಬರಲಿದೆ,’ ಎಂದು ವಿವರಿಸಿದೆ.

 

ತಪಾಸಣೆ ವೇಳೆ ಮತ್ತು ವಶಕ್ಕೆ ಪಡೆದ ನಗದು ಮೊದಲನೇ ಆರೋಪಿಗೆ ಸೇರಿದೆ. ವಶಕ್ಕೆ ಪಡೆದ ನಗದು ಲೆಕ್ಕಕ್ಕೆ ಸಿಗದಿರುವುದು ಮತ್ತು ಮೊದಲನೇ ಆರೋಪಿಯು ತೆರಿಗೆ ವ್ಯಾಪ್ತಿಗೆ ಸಲ್ಲಿಸದಿರುವುದು, ಮೂರನೇ ಆರೋಪಿ ಮತ್ತು ಮೊದಲನೇ ಆರೋಪಿಯು ನಗದಿನ ಮೂಲವು ಯಾವುದು ಎಂದು ಹೇಳಲು ವಿಫಲವಾಗಿದ್ದಾರೆ ಎಂದು ವಿವರಿಸಿದ್ದಾರೆ.

 

'ಈ ಸತ್ಯಗಳು ಮತ್ತು ಮೇಲ್ಕಂಡ ಸಾಕ್ಷಿಗಳನ್ನು ಗಮನಿಸಿದರೆ ಮೊದಲನೇ ಆರೋಪಿಯನ್ನು ಆದಾಯ ತೆರಿಗೆ ಇಲಾಖೆ ಕಾಯ್ದೆಯ ಸೆಕ್ಷನ್‌ 276ಸಿ ಮತ್ತು 277 ಕಾನೂನು ಕ್ರಮ ಜರುಗಿಸಬಹುದಾಗಿದೆ,' ಶಿಫಾರಸ್ಸು ಮಾಡಿದ್ದಾರೆ.

https://stack.thefile.in/2024/03/it-ed/22364/

ಮೊದಲ ಆರೋಪಿಗೆ ಸೇರಿದ ಮನೆಗಳ ಮೇಲೆ ದಾಳಿ ನಡೆಸಿದ ವೇಳೆಯಲ್ಲಿ ದಾಖಲೆಗಳ ಮೇಲೆ ಪ್ರಮಾಣ ಸ್ವೀಕರಿಸಲಾಗಿತ್ತು. ನಾಲ್ಕನೇ ಆರೋಪಿಯೊಂದಿಗೆ ನಿಮ್ಮ ಸಂಬಂಧದ ಕುರಿತು ಪ್ರಶ್ನಿಸಿದ್ದ ವೇಳೆಯಲ್ಲಿ ನಾಲ್ಕನೇ ಆರೋಪಿಯೊಂದಿಗೆ ಹೊಂದಿರುವ ಎಲ್ಲ ಹಣಕಾಸು ಸಂಬಂಧಗಳನ್ನು ಹೇಳಿದ್ದರು.

 

ಬಿ-2 ಸಫ್ದರ್‍‌ಜಂಗ್‌ ಎನ್‌ಕ್ಷೇವ್‌ ಮನೆ ರೂ.41,03,600 ಲಕ್ಷ, ಬಿ-4 ಸಫ್ದರ್‍‌ಜಂಗ್‌ ಎನ್‌ಕ್ಲೇವ್‌ ಮನೆ 1,37,36,500 ಕೋಟಿ, ಬಿ-5 ಸಫ್ದರ್‍‌ಜಂಗ್‌ ಎನ್‌ಕ್ಲೇವ್‌ ಮನೆ 6,68,84,100 ಕೋಟಿ, ಆರೋಪಿ-4ರ ಮನೆಯಲ್ಲಿ 12,44,900 ಲಕ್ಷ ರೂ., ಜೋವಿನ್‌ ಜೋಸೆಫ್‌ ಅವರ ಮನೆಯಲ್ಲಿ 23,38,000 ಲಕ್ಷ ರು.ಗಳನ್ನು ವಶಕ್ಕೆ ಪಡೆದಿತ್ತು.

Tags: agricultureBasanagouda Patil YatnalbjpCentral Bureau of InvestigationD K ShivakumarDPARh d kumarswamyIncome TaxinvestigationjdslokayuktaSiddaramaiahaಆದಾಯಆದಾಯಕ್ಕೂ ಮೀರಿದ ಆಸ್ತಿಆರೋಪಿಐಟಿ ದಾಳಿಕೃಷಿಡಿ ಕೆ ಶಿವಕುಮಾರ್ಡಿಪಿಎಆರ್‌ತನಿಖೆತಪಾಸಣೆತೆರಿಗೆತೆರಿಗೆ ವಂಚನೆದಾಳಿನಗದುಬಸನಗೌಡ ಪಾಟೀಲ್‌ ಯತ್ನಾಳ್‌ಬಿಜೆಪಿವಂಚನೆಸಿದ್ದರಾಮಯ್ಯಹೆಚ್‌ ಡಿ ಕುಮಾರಸ್ವಾಮಿಹೈಕೋರ್ಟ್‌
Advertisement Banner
Previous Post

ನೀಟ್‌, ಸಿಇಟಿಗೆ ತರಬೇತಿ; ಹೆಚ್ಚುವರಿ ಶುಲ್ಕ ವಸೂಲಿ, ರಸೀತಿಗಳು ತಾಳೆಯಾಗಿಲ್ಲವೆಂದ ತನಿಖಾ ತಂಡ

Next Post

ಹಣ ಬಚ್ಚಿಡಲು ಫ್ಲಾಟ್‌ಗಳ ಬಳಕೆ; 4 ಕೋಟಿ ರು. ಬೇನಾಮಿ ಹೂಡಿಕೆ, ಬಾಯ್ಬಿಟ್ಟ 5ನೇ ಆರೋಪಿ

thefilestack

thefilestack

Next Post

ಹಣ ಬಚ್ಚಿಡಲು ಫ್ಲಾಟ್‌ಗಳ ಬಳಕೆ; 4 ಕೋಟಿ ರು. ಬೇನಾಮಿ ಹೂಡಿಕೆ, ಬಾಯ್ಬಿಟ್ಟ 5ನೇ ಆರೋಪಿ

Recommended

ಅತೀಕ್‌ಗೆ ಎರಡು ಹುದ್ದೆ; ಹಿತಾಸಕ್ತಿ ಸಂಘರ್ಷವಲ್ಲವೇ ಎಂದು ಕೇಳಿದ ರಾಜ್ಯಸಭಾ ಸದಸ್ಯ ಲಹರ್‍‌ ಸಿಂಗ್‌

2 years ago

ಜಗಜ್ಯೋತಿ ಬಸವಣ್ಣ ಹೆಸರು ನಾಮಕರಣ; ಬಿಬಿಎಂಪಿ ಕೌನ್ಸಿಲ್‌ ನಿರ್ಣಯ ರದ್ದುಗೊಳಿಸಿದ ಸರ್ಕಾರ

5 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd