the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home CBI/CID

ರಾಜ್ಯಪಾಲರ ಹುದ್ದೆ ಆಮಿಷ; ಯುವರಾಜಸ್ವಾಮಿ, ಇಂದ್ರಕಲಾ ಪ್ರಕರಣ ನೆನಪಿಸಿದ ಸಿಬಿಐ

thefilestack by thefilestack
July 26, 2022
in CBI/CID
0
0
SHARES
1
VIEWS
Share on FacebookShare on Twitter

ಬೆಂಗಳೂರು; ರಾಜ್ಯಪಾಲರ ಹುದ್ದೆ ಹಾಗೂ ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಾಗುವುದು ಎಂದು ಸುಳ್ಳು ಭರವಸೆ ನೀಡುವ ಮೂಲಕ ಜನರಿಗೆ 100 ಕೋಟಿ ವಂಚಿಸಲು ಮುಂದಾಗಿತ್ತು ಎನ್ನಲಾದ ಅಂತರ ರಾಜ್ಯ ಜಾಲವೊಂದನ್ನು ಸಿಬಿಐ ಭೇದಿಸಿರುವ ಪ್ರಕರಣವು ಕರ್ನಾಟಕದಲ್ಲಿಯೂ ನಿವೃತ್ತ ನ್ಯಾಯಾಧೀಶರೊಬ್ಬರೂ ಸೇರಿದಂತೆ ಹಲವರನ್ನು ಸಂಘ ಪರಿವಾರದ ಹಿನ್ನೆಲೆಯ ಯುವರಾಜಸ್ವಾಮಿ ಎಂಬಾತ ವಂಚಿಸಿದ್ದ ಪ್ರಕರಣವನ್ನೂ ನೆನಪಿಸಿದೆ.

 

ಬಿಜೆಪಿಯ ರಾಷ್ಟ್ರೀಯ ಘಟಕದ ಹಲವು ಧುರೀಣರ ಹೆಸರು ಮತ್ತು ಸ್ನೇಹವನ್ನು ಬಳಸಿಕೊಂಡಿದ್ದ ಯುವರಾಜಸ್ವಾಮಿ ಎಂಬಾತ ಹಾಲಿ ರಾಜ್ಯ ಬಿಜೆಪಿ ಸರ್ಕಾರದ ಹಲವು ಸಚಿವರು ಮತ್ತು ನಿಗಮ ಮಂಡಳಿ ಆಕಾಂಕ್ಷಿಗಳಿಗೂ ಆಮಿಷವೊಡ್ಡಿ ವಂಚಿಸಿದ್ದ ಪ್ರಕರಣವು ಸಿಬಿಐ ಬಂಧಿಸಿರುವ ಜಾಲದ ಮಾದರಿಯಲ್ಲಿಯೇ ಇದೆ.

 

ದೆಹಲಿಯಲ್ಲಿ ಸಿಬಿಐ ದಾಖಲಿಸಿರುವ ಎಫ್‌ಐಆರ್‌ ಪ್ರಕಾರ ಕರ್ನಾಟಕದ ಬೆಳಗಾವಿಯಲ್ಲಿ ವಾಸವಿರುವ ರವೀಂದ್ರ ವಿಠಲ ನಾಯ್ಕ ಎಂಬಾತನ ಹೆಸರೂ ಇದೆ. ಉಳಿದಂತೆ ಮಹಾರಾಷ್ಟ್ರ ಲಾತೂರಿನ ಕಮಲಾಕರ ಪ್ರೇಮಕುಮಾರ್ ಬಾಂದಗರ, ದೆಹಲಿಯ ಮಹೇಂದ್ರ ಪಾಲ್ ಅರೋರಾ, ಅಭಿಷೇಕ್ ಬೂರಾ ಹಾಗೂ ಮೊಹಮ್ಮದ್ ಏಜಾಜ್ ಖಾನ್‌ ಎಂಬುವವರ ಹೆಸರುಗಳನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ.

 

‘ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗುವುದು, ರಾಜ್ಯಸಭಾ ಸೀಟು ಕೊಡಿಸಲಾಗುವುದು, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳಡಿ ಕಾರ್ಯ ನಿರ್ವಹಿಸುವ ಸಂಸ್ಥೆಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಿಸಲಾಗುವುದು ಎಂಬುದಾಗಿ ಸುಳ್ಳು ಭರವಸೆಗಳನ್ನು ನೀಡಿ, ಜನರಿಂದ ಕೋಟ್ಯಂತರ ರೂಪಾಯಿ ಪಡೆಯುವ ಸಂಚು ರೂಪಿಸಿದ್ದರು’ ಎಂಬ ಅಂಶವನ್ನು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

 

ಥೇಟ್‌ ಇದೇ ಮಾದರಿಯಲ್ಲಿಯೇ ಯುವರಾಜಸ್ವಾಮಿ ಎಂಬಾತನು ಹೈಕೋರ್ಟ್‌ ನ್ಯಾಯಾಧೀಶರಾಗಿ ನಿವೃತ್ತರಾಗಿದ್ದ ಇಂದ್ರಕಲಾ ಅವರಿಗೂ ರಾಜ್ಯಪಾಲರ ಹುದ್ದೆ ಕೊಡಿಸುವುದಾಗಿ ನಂಬಿಸಿ ಅವರಿಂದ 8.25 ಕೋಟಿ ರು. ಪಡೆದು ಆ ನಂತರ ವಂಚಿಸಿದ್ದ. ಈ ಕುರಿತು ಇಂದ್ರಕಲಾ ಅವರು ದೂರು ದಾಖಲಿಸಿದ್ದರು.

 

‘ಜನರನ್ನು ನಂಬುವಂತೆ ಮಾಡುವ ಸಲುವಾಗಿ ಆರೋಪಿಗಳು ಹಿರಿಯ ಅಧಿಕಾರಿಗಳು ಹಾಗೂ ರಾಜಕೀಯ ವ್ಯಕ್ತಿಗಳ ಹೆಸರುಗಳನ್ನು ಬಳಕೆ ಮಾಡುತ್ತಿದ್ದರು. ಇಲ್ಲವೇ, ತಮ್ಮ ಈ ಕಾರ್ಯದಲ್ಲಿ ಮಧ್ಯವರ್ತಿಯಂತೆ ಕಾರ್ಯ ನಿರ್ವಹಿಸುತ್ತಿದ್ದ ಅಭಿಷೇಕ್‌ ಬೂರಾ ಮೂಲಕ ಈ ಹೆಸರುಗಳನ್ನು ಬಳಸುತ್ತಿದ್ದರು.’ ಎಂಬ ಬಗ್ಗೆ ಸಿಬಿಐಗೆ ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಜಾಡನ್ನು ಹಿಡಿದು ಶೋಧ ನಡೆಸಿದ ಅಧಿಕಾರಿಗಳು, ಈ ವಂಚನೆಯ ಜಾಲವನ್ನು ಭೇದಿಸಿದ್ದಾರೆ ಎಂದು ಮೂಲಗಳು ಹೇಳಿವೆ.

 

ಇದೇ ರೀತಿಯಲ್ಲಿಯೇ ರಾಜ್ಯದಲ್ಲಿಯೂ ಯುವರಾಜಸ್ವಾಮಿ ಎಂಬಾತನೂ ಸಂಘಪರಿವಾರದ ಹಲವರು, ಕೇಂದ್ರದ ಹಲವು ಸಚಿವರುಗಳ ಹೆಸರುಗಳನ್ನು ಬಳಕೆ ಮಾಡಿದ್ದ. ಈ ಕುರಿತು ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿತ್ತು. ಈ ಸಂಬಂಧ 'ದಿ ಫೈಲ್‌' 10 ವರದಿಗಳನ್ನು ಸರಣಿ ರೂಪದಲ್ಲಿ ಪ್ರಕಟಿಸಿತ್ತು.

 

ಸಿಬಿಐ ಬಂಧಿಸಿರುವ ಪ್ರಕರಣದ ಮಾದರಿಯಲ್ಲಿಯೇ ಯುವರಾಜಸ್ವಾಮಿ ಪ್ರಕರಣವು ಹೋಲುವುದರಿಂದ ಆ ಎಲ್ಲಾ ವರದಿಗಳನ್ನು ಇಲ್ಲಿ ಕೊಡಲಾಗಿದೆ.

 

https://stack.thefile.in/2021/07/governance/8147/

ವಂಚಕ ಯುವರಾಜಸ್ವಾಮಿ ಮನೆಯಲ್ಲಿದ್ದವು ನಿರಾಣಿ ಹೆಸರಿನ ಲೆಟರ್‌ಹೆಡ್‌ಗಳು; ಕಲ್ಪವೃಕ್ಷದ ಗುಟ್ಟೇನು?

https://stack.thefile.in/2021/07/governance/8163/

 

 

ರಾಜ್ಯಪಾಲರಾಗಲು ಬಯಸಿದ್ದ ಇಂದ್ರಕಲಾರಿಗೆ ರಾಕ್‌ಲೈನ್‌ ವೆಂಕಟೇಶ್‌ರಿಂದಲೂ 50 ಲಕ್ಷ ನೆರವು

https://stack.thefile.in/2021/07/governance/8186/

 

ಯುವರಾಜಸ್ವಾಮಿ ಬಳಿ ಕತ್ತಿ, ಶ್ರೀರಾಮುಲು, ಪ್ರಮೋದ್‌ ಮಧ್ವರಾಜ್‌ ಬಯೋಡೇಟಾ ಪತ್ತೆ

https://stack.thefile.in/2021/07/governance/8207/

ಯುವರಾಜಸ್ವಾಮಿಯಿಂದ ಶ್ರೀರಾಮುಲು ಖಾತೆಗೆ 18 ಲಕ್ಷ ರು. ವರ್ಗಾವಣೆ

https://stack.thefile.in/2021/07/governance/8225/

ಇಂದ್ರಕಲಾ ಪ್ರಕರಣ; 2ನೇ ಆರೋಪಿ ಪಾಪಯ್ಯರನ್ನು ದೋಷಾರೋಪಣೆಯಲ್ಲಿ ಕೈ ಬಿಟ್ಟ ತನಿಖಾ ತಂಡ

 

https://stack.thefile.in/2021/08/governance/8240/

ಪ್ರಮೋದ್‌ ಮಧ್ವರಾಜ್‌ ಖಾತೆಯಿಂದ ಯುವರಾಜಸ್ವಾಮಿ ಖಾತೆಗೆ 90 ಲಕ್ಷ ರು. ಸಂದಾಯ

https://stack.thefile.in/2021/08/governance/8246/

ಮಾಸ್ಟರ್‌ ಬೆಡ್‌ ರೂಂ ರಹಸ್ಯ; ವಾರ್ಡ್‌ರೂಬ್‌ನಲ್ಲಿದ್ದವು 90 ಕೋಟಿ ರು. ನಮೂದಿಸಿದ್ದ ಚೆಕ್‌ ಹಾಳೆಗಳು

https://stack.thefile.in/2021/08/governance/8260/

ಆರ್‌ಎಸ್‌ಎಸ್‌ ಒಡನಾಟದ ಬಗ್ಗೆ ಬಾಯ್ಬಿಟ್ಟ ಯುವರಾಜ್‌; ಹೇಳಿಕೆಯಲ್ಲಿದೆ ಹೆಸರುಗಳ ಪಟ್ಟಿ

https://stack.thefile.in/2021/08/governance/8274/

ಯುವರಾಜಸ್ವಾಮಿ ಹೆಸರಿಗೆ ಡಿ ಎಸ್‌ ವೀರಯ್ಯರಿಂದಲೂ 50 ಲಕ್ಷ ಮೊತ್ತದ ಚೆಕ್‌

https://stack.thefile.in/2021/08/governance/8287/

 

ಆರೋಪಿ ಯುವರಾಜಸ್ವಾಮಿಯ ಆಮಿಷಕ್ಕೆ ಒಳಗಾಗಿ ಕೋಟ್ಯಂತರ ರುಪಾಯಿ ನೀಡಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾಗಿದ್ದ ಇಂದ್ರಕಲಾ ವಿರುದ್ದ ಭ್ರಷ್ಟಾಚಾರ ತಡೆ ಕಾಯ್ದೆ (ತಿದ್ದುಪಡಿ) ಅನ್ವಯ ಜನಾಧಿಕಾರ ಸಂಘರ್ಷ ಪರಿಷತ್‌ ಎಸಿಬಿಯಲ್ಲಿ ದೂರು ದಾಖಲಿಸಿತ್ತು. ಆದರೆ ಈ ಪ್ರಕರಣವನ್ನು ಎಸಿಬಿಯು ಸಿಬಿಐಗೆ ವರ್ಗಾಯಿಸಿತ್ತು. ಆದರೆ ಇನ್ನುಳಿದ ಪ್ರಕರಣದಲ್ಲಿ ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದನ್ನು ಸ್ಮರಿಸಬಹುದು.

Tags: b l santhoshB S YediyurappacbiChargsheetD K ShivakumarD S VeeriahaGovernarh d kumarswamyHigh CourtJustice IndrakalaMurugesh R NiraniPromodh MadhwarajRSSSangh ParivarSiddaramaiahYuvarajswamiಇಂದ್ರಕಲಾಎಫ್‌ಐಆರ್‌ಕೋಟ್ಯಂತರ ವಂಚನೆಡಿ ಎಸ್‌ ವೀರಯ್ಯದೋಷಾರೋಪಣೆ ಪಟ್ಟಿನಿವೃತ್ತ ನ್ಯಾಯಾಧೀಶಪ್ರಮೋದ್‌ ಮಧ್ವರಾಜ್‌ಮುರುಗೇಶ್‌ ಆರ್‌ ನಿರಾಣಿರಾಜ್ಯಪಾಲರ ಹುದ್ದೆ ಆಮಿಷಸಂಘ ಪರಿವಾರಸಂಚುಸಿಬಿಐ ಶೋಧಹೈಕೋರ್ಟ್‌
Advertisement Banner
Previous Post

ನಿರ್ಮಲ ಭಾರತ ಟ್ರಸ್ಟ್‌ಗೆ 4 ಕೋಟಿ ಮೌಲ್ಯದ ಜಮೀನು ಮಂಜೂರು ಪ್ರಸ್ತಾವನೆ; ಬಿಜೆಪಿ ಶಾಸಕರ ಒತ್ತಡ?

Next Post

ಸಾಮಾಜಿಕ ಜಾಲತಾಣ; ಅನುದಾನ ನಿಗದಿಯಾಗದಿದ್ದರೂ ಸಚಿವ ನಾಗೇಶ್‌ರಿಗಾಗಿ ಲಕ್ಷಾಂತರ ವೆಚ್ಚ ಬಹಿರಂಗ

thefilestack

thefilestack

Next Post

ಸಾಮಾಜಿಕ ಜಾಲತಾಣ; ಅನುದಾನ ನಿಗದಿಯಾಗದಿದ್ದರೂ ಸಚಿವ ನಾಗೇಶ್‌ರಿಗಾಗಿ ಲಕ್ಷಾಂತರ ವೆಚ್ಚ ಬಹಿರಂಗ

Recommended

300 ಕೋಟಿ ರಾಯಧನ ಸಂಗ್ರಹಣೆಗೆ ಕೆಪಿಸಿಎಲ್‌ ನಕಾರ; ತೆರಿಗೆಯೇತರ ಆದಾಯ ಪರಿಷ್ಕರಣೆಗೆ ವಿಘ್ನ?

2 years ago

ದ್ವೇಷ ಭಾಷಣ, ಧಾರ್ಮಿಕ ಭಾವನೆಗೆ ಧಕ್ಕೆ,ಹಿಂಸಾಚಾರ; ಒಂದೇ ವರ್ಷದಲ್ಲಿ 330 ಪ್ರಕರಣ ಹಿಂಪಡೆದ ಸರ್ಕಾರ

4 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd