the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home LEGISLATURE

ಉದ್ಧಟತನ; ಅಕ್ರಮ ನಡೆದಿಲ್ಲವೆಂದು ವಾಸ್ತವಾಂಶಗಳ ಮರೆಮಾಚಿದರೇ ಪರಿಷತ್‌ ಕಾರ್ಯದರ್ಶಿ?

thefilestack by thefilestack
August 23, 2021
in LEGISLATURE
0
0
SHARES
0
VIEWS
Share on FacebookShare on Twitter

ಬೆಂಗಳೂರು; ಪರಿಷತ್‌ನಲ್ಲಿ ನಡೆದಿದೆ ಎನ್ನಲಾಗಿರುವ ಹಲವು ಅಕ್ರಮಗಳಿಗೆ ಸಂಬಂಧಿಸಿದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಬರೆದಿದ್ದ ಪತ್ರ ಮತ್ತು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡದ ಕಾರ್ಯದರ್ಶಿ ಮಹಾಲಕ್ಷ್ಮಿ ಅವರು ಉದ್ಧಟತನದ ವರ್ತನೆ ತೋರಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ. ಅಲ್ಲದೆ ವಾಸ್ತವಾಂಶಗಳನ್ನು ಮರೆಮಾಚಿ ಯಾವ ಅಕ್ರಮವೂ ನಡೆದಿಲ್ಲ ಎಂದು ಬಿಂಬಿಸುವಂತಹ ವರದಿ ನೀಡಿ ಕೈತೊಳೆದುಕೊಂಡಿದ್ದಾರೆ!

ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳ ಉಲ್ಲಂಘನೆ ಮಾಡಿರುವ ಬಗ್ಗೆ ಸ್ಪಷ್ಟವಾಗಿ ಬಸವರಾಜ ಹೊರಟ್ಟಿ ಅವರು 2021ರ ಆಗಸ್ಟ್‌ 10ರಂದು ಬರೆದಿದ್ದ ಪತ್ರಕ್ಕೆ ಮಹಾಲಕ್ಷ್ಮಿ ಅವರು 2021ರ ಆಗಸ್ಟ್‌ 13ರಂದು ಉತ್ತರಿಸಿದ್ದಾರೆ. ಆದರೆ ಈ ಉತ್ತರವೂ ಅಸಮರ್ಪಕವಾಗಿದೆ ಎಂದು ಗೊತ್ತಾಗಿದೆ.

ಹೊರಟ್ಟಿ ಅವರು ಕೇಳಿರುವ ಪ್ರತಿ ಪ್ರಶ್ನೆಗೂ ಹಾರಿಕೆ ಉತ್ತರ ನೀಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಮಹಾಲಕ್ಷ್ಮಿ ಅವರು ‘ಎಲ್ಲಾ ಕಡತಗಳು ಮತ್ತು ದಾಖಲೆಗಳು ತಮ್ಮ ಬಳಿಯೇ ಇವೆ’ ಎಂದು ಉತ್ತರಿಸಿ ನುಣುಚಿಕೊಂಡಿದ್ದಾರೆ. ಅವ್ಯವಹಾರ, ಅಕ್ರಮ ಸೇರಿದಂತೆ ಇನ್ನಿತರೆ ಪ್ರಕರಣಗಳ ಸಂಬಂಧ ಪ್ರತಿ ಕಡತಗಳೂ ಆಡಳಿತ ಮುಖ್ಯಸ್ಥರಾದ ಕಾರ್ಯದರ್ಶಿಗಳ ಬಳಿಯೇ ಇರುತ್ತವೆ. ಆದರೂ ಕಾರ್ಯದರ್ಶಿ ಮಹಾಲಕ್ಷ್ಮಿ ಅವರು ತಮ್ಮ ಬಳಿ ಯಾವ ಕಡತಗಳೂ ಇಲ್ಲ, ಎಲ್ಲವೂ ತಮ್ಮ ಬಳಿಯೇ ಇವೆ. ಅವುಗಳನ್ನು ಪರಾಮರ್ಶಿಸಬಹುದು ಎಂದು ಹೇಳುವ ಮೂಲಕ ಉದ್ಧಟತನ ಮೆರೆದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ.

ಹಲವು ಪ್ರಕರಣಗಳ ಕುರಿತು ಸಭಾಪತಿ ಹೊರಟ್ಟಿ ಅವರು ವರದಿ ಕೇಳಿದ್ದರೇ ಕೇವಲ ದಾಖಲೆಗಳನ್ನು ಸಲ್ಲಿಸಿರುವ ಕಾರ್ಯದರ್ಶಿ ನಡೆ ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ’48 ಲಕ್ಷ ರು. ನಷ್ಟ ಮತ್ತು ಸ್ವಜನ ಪಕ್ಷಪಾತ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳೊಂದಿಗೆ ಕಡತವನ್ನು ಸಲ್ಲಿಸಲಾಗಿರುತ್ತದೆ. ಹಾಗೂ ತಾವು 2021ರ ಜುಲೈ 22ರ ಟಿಪ್ಪಣಿಯನ್ನು 2021ರ ಜುಲೈ 23ರಂದು ಸ್ವೀಕೃತವಾಗಿದ್ದನ್ನು ಆ ದಿನವೇ ಈ-ಮೈಲ್‌ ಮೂಲಕ ತಮಗೆ ಮಾಹಿತಿಯನ್ನು ನೀಡಿರುತ್ತೇನೆ. ಹಾಗೂ 2021ರ ಜುಲೈ 24ರಂದು ನಾಲ್ಕನೇ ಶನಿವಾರ ಶಾಸಕರ ಭವನದ ಕಚೇರಿಗೆ ಬಂದು ಖುದ್ದಾಗಿ ದಾಖಲೆಗಳನ್ನು ಸಲ್ಲಿಸಿರುತ್ತೇನೆ. ನಾನು ಸಲ್ಲಿಸಿರುವ ದಾಖಲೆಗಳು ಕಡತದಲ್ಲಿ ಲಭ್ಯವಿದ್ದು ತಾವು ಪರಾಮರ್ಶಿಸಬಹುದಾಗಿದೆ,’ ಎಂದು ಉತ್ತರಿಸಿರುವುದು ಕಾರ್ಯದರ್ಶಿಯ ಪತ್ರದಿಂದ ತಿಳಿದು ಬಂದಿದೆ.

https://stack.thefile.in/2021/08/legislature/8441/

ಆರ್ಥಿಕ ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ ಉತ್ತರ ನೀಡಿರುವ ಕಾರ್ಯದರ್ಶಿ ಮಹಾಲಕ್ಷ್ಮಿ ಅವರು ‘ಸಭಾಪತಿ ಅವರ ಅನುಮೋದನೆಯೊಂದಿಗೆ ಹೊರಗುತ್ತಿಗೆ ಆಧಾರದ ಮೇಲೆ ಕಿಯೋನಿಕ್ಸ್‌ ಸಂಸ್ಥೆಯಿಂದ ನೇಮಕ ಮಾಡಿಕೊಳ್ಳಲಾಗಿತ್ತು. ತಮ್ಮ ಅನುಮೋದನೆ ಪಡೆದು ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿದೆ. ಈ ಸಂಬಂಧದ ಕಡತವು (ಕಡತ ಸಂಖ್ಯೆ; ಕವಿಪ/1/12/ಅಇಮಾ/2020) ತಮ್ಮ ಕಚೇರಿಯಲ್ಲಿದೆ. ಇದನ್ನು ಹಿಂದಿರುಗಿಸಿದ್ದಲ್ಲಿ ಸಂಪೂರ್ಣ ಮಾಹಿತಿ ನೀಡುತ್ತೇನೆ,’ ಎಂದು ಉತ್ತರಿಸಿದ್ದಾರೆ.

ಪರಿಷತ್‌ನ ನೌಕರರು ಎರಡು ಸರ್ಕಾರಿ ಸ್ವಾಮ್ಯದ ವಸತಿ ಗೃಹಗಳನ್ನು ಪಡೆದಿರುವುದಕ್ಕೆ ಸಂಬಂಧಿಸಿದಂತೆ ಅನುಪಾಲನ ವರದಿ ನೀಡದಿರುವುದಕ್ಕೆ ಉತ್ತರಿಸಿರುವ ‘ವಿಳಂಬಕ್ಕೆ ಸೂಕ್ತ ವಿವರಣೆಯೊಂದಿಗೆ ಕೂಡಲೇ ಕಡತವನ್ನು ಸಲ್ಲಿಸಲು ಆಧೀನ ಕಾರ್ಯದರ್ಶಿಗೆ ಸೂಚಿಸಿರುತ್ತೇನೆ,’ ಎಂದು ಉತ್ತರಿಸಿರುವುದು ಪತ್ರದಿಂದ ಗೊತ್ತಾಗಿದೆ.

ಚರ್ಚಾ ಸಂಪಾದಕರ ಹುದ್ದೆಯಿಂದ ಮುಖ್ಯ ಚರ್ಚಾ ಸಂಪಾದಕರ ಹುದ್ದೆಗೆ ಪದನ್ನೋತಿ ನೀಡುವ ಸಂಬಂಧ ಕಡತವನ್ನು ಪರಿಶೀಲಿಸಿ ವರದಿ ಸಲ್ಲಿಸಲು 3 ದಿನಗಳ ಕಾಲಾವಕಾಶ ನೀಡಲು ಕೋರಿರುವುದು ತಿಳಿದು ಬಂದಿದೆ.

ಧರ್ಮೇಗೌಡರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸದನ ಸಮಿತಿಯು ನೀಡಿರುವ ಮಧ್ಯಂತರ ವರದಿಯು ಸದನಕ್ಕೆ ಸೀಮಿತವಾಗಿರುತ್ತದೆ. ಆದರೂ ಕಡತವನ್ನು ಪುನಃ ಸಲ್ಲಿಸಲಾಗುತ್ತದೆ ಎಂದು ಉತ್ತರಿಸಿದ್ದಾರೆ.

Tags: B S YediyurappaBasavaraj HorattiBasavraj Bommaih d kumarswamyH VishwanathK R MahalakshmiKEONICSLegislature CouncilMaritibbe Gowdas r patilSiddaramaiahVishweshwar Hegde Kageriಎಚ್‌ ಡಿ ಕುಮಾರಸ್ವಾಮಿಎಚ್‌ ವಿಶ್ವನಾಥ್‌ಎಸ್‌ ಆರ್‌ ಪಾಟೀಲ್‌ಕಿಯೋನಿಕ್ಸ್‌ಕೆ ಆರ್‌ ಮಹಾಲಕ್ಷ್ಮಿಬಸವರಾಜ ಬೊಮ್ಮಾಯಿಬಸವರಾಜ ಹೊರಟ್ಟಿಬಿ ಎಸ್‌ ಯಡಿಯೂರಪ್ಪಮರಿತಿಬ್ಬೇಗೌಡರಮೇಶ್‌ಬಾಬುವಿಧಾನಪರಿಷತ್‌ವಿಶ್ವೇಶ್ವರ ಹೆಗಡೆ ಕಾಗೇರಿವೇತನ ಹಗರಣಸಿದ್ದರಾಮಯ್ಯ
Advertisement Banner
Previous Post

ಲಸಿಕೆ ಹಾಕಿಸದಿದ್ದರೆ ಪಡಿತರ ರದ್ದು; ತಹಶೀಲ್ದಾರ್‌, ಜಿಲ್ಲಾಧಿಕಾರಿಗಳಿಂದ ಆಹಾರ ಹಕ್ಕಿನ ಉಲ್ಲಂಘನೆ

Next Post

ಹಿಂದೂ ದೇಗುಲದ ಎದುರಿಗಿದ್ದಿದ್ದಕ್ಕೆ ಇಸ್ಲಾಮಿಕ್‌ ಕಾಲೇಜನ್ನು ವಶಪಡಿಸಿಕೊಂಡಿತೇ ಸರ್ಕಾರ?

thefilestack

thefilestack

Next Post

ಹಿಂದೂ ದೇಗುಲದ ಎದುರಿಗಿದ್ದಿದ್ದಕ್ಕೆ ಇಸ್ಲಾಮಿಕ್‌ ಕಾಲೇಜನ್ನು ವಶಪಡಿಸಿಕೊಂಡಿತೇ ಸರ್ಕಾರ?

Discussion about this post

Recommended

ಕೋವಿಡ್‌ ಸಾವು; ಒಂದು ಲಕ್ಷ ಪರಿಹಾರ ಘೋಷಿಸಿದ್ದ ಆದೇಶ ಹಿಂಪಡೆದ ಸರ್ಕಾರ

4 years ago

ಆರ್ಥಿಕ ನಷ್ಟ; ಕಾಮಗಾರಿಗಳ ಮೊತ್ತ ಬಿಡುಗಡೆಗೆ ತಡೆಯೊಡ್ಡದಂತೆ ಸಿದ್ದರಾಮಯ್ಯಗೆ ಪತ್ರ ಬರೆದ ಕೆಂಪಣ್ಣ

3 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd